Published On: Wed, Apr 3rd, 2024

ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ: ಬೃಹತ್ ಪಾದಯಾತ್ರೆ

ಕೈಕಂಬ: ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಲೋಕಕಲ್ಯಾಣಾರ್ಥವಾಗಿ ಹಾಗೂ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಕ್ರಮಬದ್ಧವಾಗಿ ಜಾರಿಗೊಳಿಸಬೇಕು, ಕ್ಷೇತ್ರದ ವತಿಯಿಂದ ಗೋಶಾಲೆ ನಿರ್ಮಾಣಗೊಳ್ಳಬೇಕು, ಹಿಂದೂ ಸಮಾಜಕ್ಕೆ ಧಾರ್ಮಿಕ ಶಿಕ್ಷಣದ ಅಗತ್ಯತೆ ಇರುವುದರಿಂದ ಬಾಲ ಸಂಸ್ಕಾರ ಕೇಂದ್ರದಂತಹ ಧಾರ್ಮಿಕ ಶಿಕ್ಷಣ ಕೇಂದ್ರ ಸ್ಥಾಪನೆ ಮಾಡಬೇಕು, ಬಡ ಹಿಂದೂ ಕುಟುಂಬಗಳಿಗೆ ನೆರವಾಗುವಂತೆ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಬೇಕು ಕುಟುಂಬಗಳಿಗೆ ನೆರವಾಗುವಂತೆ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಬೇಕು ಎಂಬ ಮನವಿಯೊಂದಿಗೆ ಬೃಹತ್ ಪಾದಯಾತ್ರೆ ಯು ಏ.೭ರಂದು ಬೆಳಗ್ಗೆ ೫:೩೦ಕ್ಕೆ ಪೊಳಲಿ ದ್ವಾರ ಕಡೆಗೋಳಿ ಪುದು ತುಂಬೆ, ಬೆಳಗ್ಗೆ ೫:೩೦ಕ್ಕೆ ಪೊಳಲಿ ದ್ವಾರ ಕೈಕಂಬ ಬಿ.ಸಿ ರೋಡ್‌ನಲ್ಲಿ ಹಾಗೂ ಪೊಳಲಿ ದ್ವಾರ ಗುರುಪುರ ಕೈಕಂಬದಿಂದ ಬೆಳಗ್ಗೆ ೭:೦೦ಗಂಟೆಗೆ ಪಾದಯಾತ್ರೆ ಹೊರಡಲಿದೆ, ಸಮಸ್ತ ಬಾಂಧವರು ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter