ವೈದ್ಯರಲ್ಲಿ ಹೋದಾತ ನಾಪತ್ತೆ
ಬಂಟ್ವಾಳ: ವೈದ್ಯರಲ್ಲಿಗೆ ಹೋಗಿದ್ದ ವ್ಯಕ್ತಿಯೋರ್ವ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇರಾ ಗ್ರಾಮದ ಕೆಂಜಿಲ ನಿವಾಸಿ ಏಕನಾಥ ( 39) ಕಾಣೆಯಾದವರು.ಕಳೆದ ಒಂದು ವರ್ಷದಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕಲ್ಲಡ್ಕ ವೈದ್ಯರ ಬಳಿಗೆ ತೆರಳಿದವರು ವಾಪಸು ಮನೆಗೆ ಬಂದಿಲ್ಲ ಎಂದು ಅವರ ತಮ್ಮ ಸುಜಿತ್ ಠಾಣೆಗೆ ದೂರು ನೀಡಿದ್ದಾರೆ.
ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಿದ್ದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.