Published On: Wed, Apr 24th, 2024

ಲಲಿತಾ ಸಹಸ್ರನಾಮ ಹೋಮ ಹಾಗೂ ಏಕಾಹ ಭಜನೋತ್ಸವ

ಕೈಕಂಬ: ಮಂಡಾಡಿಯ ಶ್ರೀ ದುರ್ಗಾಂಬಾ ಮಂದಿರದಲ್ಲಿ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏ.೨೬ ಶುಕ್ರವಾರದಿಂದ ಏ.೨೯ರ ಸೋಮವಾರದವರೆಗೆ ಲಲಿತಾ ಸಹಸ್ರನಾಮ ಹೋಮ ಮತ್ತು ಏಕಾಹ ಭಜನೋತ್ಸವ ನಡೆಯಲಿದೆ.

ಏ.೨೭ರಂದು ಶನಿವಾರ ಲಲಿತಾ ಸಹಸ್ರನಾಮ ಹೋಮ ನಡೆಯಲಿದ್ದು, ಮಧ್ಯಾಹ್ನ ೧೨:೦೦ಗಂಟೆಗೆ ಮೂಡುಬಿದ್ರ ಶ್ರೀ ಕರಿಂಜ ಕ್ಷೇತ್ರದ ಶಕ್ತಿ ಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶಿರ್ವಚನ ನೀಡಲಿದ್ದಾರೆ.

ಸಂಜೆ ೬:೦೦ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮:೩೦ಕ್ಕೆ ವೈಷ್ಣವಿ ಕಲಾವಿದೆರ್ ಕೊಯಿಲ ಇವರಿಂದ ಕುಸಲ್ದ ಗೌಜಿ ನಾಟಕ ಪ್ರದರ್ಶನ ನಡೆಯಲಿದೆ.

ಏ.೨೮ರಂದು ಭಾನುವಾರ ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಏಕಾಹ ಭಜನೋತ್ಸವ ಹಾಗೂ ಭಜನಾ ಮಂಗಳೋತ್ಸವ ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter