ಸುಜೀರು ಶಾಲೆಯ ಸಭಾಂಗಣ ,ತರಗತಿ ಕೊಠಡಿಗೆ ಅನುಧಾನ
ಫರಂಗಿಪೇಟೆ:ಮಂಗಳೂರು ತಾಲೂಕಿನ ಪುದುಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಮೂಲಸೌಕರ್ಯದ ಕೊರತೆಯನ್ನು ನೀಗಿಸಲು ಸಭಾಂಗಣ ಮತ್ತು ತರಗತಿ ಕೊಠಡಿಗಳ ಅವಸ್ಯಕತೆ ಇದ್ದು ಯಾವುದೇ ಸಭೆಸಮಾರಂಭಗಳನ್ನು ಮಾಡಲು ಸಭಾಂಗಣ ಅಗತ್ಯ.ಎಂದು ಶಾಲಾಭಿವೃದ್ಧಿ ಸಮಿತಿಯ ಮನವಿಯ ಮೇರೆಗೆ ಕೂಡಲೇ ಸ್ಪಂದಿಸಿ ರೂ. 3 ಲಕ್ಷ ಅನುಧಾನವನ್ನು ಒದಗಿಸಿಕೊಟ್ಟ ಸಚಿವ ಯು.ಟಿ.ಖಾದರ್ .
ಗ್ರಾಮ ಪಂಚಾಯತಿಯ ಗ್ರಾಮವಿಕಾಸ ಯೋಜನೆಯಡಿಯಲ್ಲಿ 3ಲಕ್ಷದ ಅನುದಾನದಲ್ಲಿ ಸುಸಜ್ಜಿತವಾದ ಸಭಾಂಗಣ ನಿರ್ಮಿಸಲು ಪ್ರಯತ್ನಿಸಿದ ಜಿ.ಪಂ ಸದಸ್ಯ ಶಾಲಾಭಿವೃದ್ಧಿ ಅಧ್ಯಕ್ಷ ಉಮ್ಮರ್ ಫಾರೂಕ್ ಅವರನ್ನು ಶಾಲಾ ಶಿಕ್ಷಕರು ಅಭಿನಂದಿಸಿದ್ದಾರೆ. ಈಸಂದರ್ಭಲ್ಲಿ ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್, ಶಾಲಾ ಮುಖ್ಯ ಶಿಕ್ಷಕಿ ಶಾಲಾ ಸಹ ಶಿಕ್ಷಕ ಜಿ.ಪಂ.ಎಂಜಿನೀಯರ್ ರವಿ. ಗುತ್ತಿಗೆಧಾರ ಯಶೋಧರ ಮತ್ತಿತರರು ಇದ್ದರು.