ಕರೆಂಟ್ ಕಂಬ ಬಿರುಕು; ಅಪಾಯಕ್ಕೆ ಆಹ್ವಾನ
ಮಂಜೇಶ್ವರ: ಹೊಸಂಗಡಿಯ ಮೂಡಂಬೈಲು ಶಾಲೆಗೆ ಹೋಗುವ ದಾರಿಯಲ್ಲಿ ಹೈಟೆನ್ಸನ್ ಕರೆಂಟ್ ಕಂಬವು ಮಧ್ಯದಲ್ಲಿ ತುಂಡಾಗಿದ್ದು ಯಾವುದೇ ಸಮಯಕ್ಕೆ ಬೀಳು ಸಾಧ್ಯತೆ ಇದೆ.ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೂ ಈ ಭಾಗಕ್ಕೆ ಸುಳಿಯದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮೂಡಂಬೈಲು ಶಾಲೆಯಿದ್ದು ವಿದ್ಯಾರ್ಥಿಗಳು, ಅನೇಕ ಕಾರ್ಮಿಕರು, ವಾಹನಗಳು ಸಂಚರಿಸುವ ಪ್ರತದೇಶವಾದರಿಂದ ಕೂಡಲೇ ಕರೆಂಟ್ ಕಂಬ ಬದಲಾವಣೆ ಮಾಡಿ ಅಪಾಯ ಸಂಭವಿಸುವುದನ್ನು ತಪ್ಪಿಸಬೇಕೆಂದು ಕೋರಿದ್ದಾರೆ.