ಪೊಳಲಿ : ದೈವ ಬಂಧ ವಿಮೋಚನಾ ಪೂಜೆ
ವಿಕಸುದ್ದಿಲೋಕ ಪೊಳಲಿ : ಶ್ರಿ ರಾಜರಾಜೇಶ್ವರಿ ದೇವಾಲಯದಲ್ಲಿ ಕೊಡಮಣಿತ್ತಾಯ ದೈವದ ಬಂಧ ವಿಮೋಚನಾ ಕಾರ್ಯದ ಪ್ರಯುಕ್ತ ಸಾನಿದ್ಯ ಪ್ರಾರ್ಥನೆ ,ಗಣಪತಿ ಪೂಜೆ ,ಕರ್ಮಾಂಗ ಪುಣ್ಯಾಹ ,ಸುದರ್ಶನ ಹೋಮ ,ಅಘೋರ ಹೋಮ,ತಿಲ ಹೋಮ , ಬ್ರಾಹ್ಮಣ ಆರಾಧನೆ , ದುರಿತ ಪರಿಹಾರ ಪೂಜಾ ಪುನಸ್ಕಾರಗಳು ನಡೆದವು.
ಪೂರ್ವಿಕವಾದ ಪೊಳಲಿ ದೇವಾಲಯದ ಪವಿತ್ರಪಾಣಿ ದಿವಂಗತ ಪದ್ಮನಾಭ ಅಡಿಗಲು ಹಾಗೂ ಕೊಡಮಣಿತ್ತಾಯ ದೈವದ ಪಾತ್ರಿ ಕಡ್ತಲಬೆಟ್ಟುಗುತ್ತು ನಂದ ದಿವಂಗತ ಮೋನಪ್ಪ ಶೆಟ್ಟಿಯ ಪ್ರೇತ ಬಂಧಮುಕ್ತ ರಕ್ಷಸ್ಸು ಬೇರ್ಪಾಡು ಮಾಡಿಕೊಂಡು ವಿಶೇಶವಾಗಿ ಪ್ರತಿಮಾವಾಹನೆಯ ಮೂಲಕ ಶೈವ ಶಾಕ್ತೇಯ ವೈಶ್ಣವ ಭಾವಗಳನ್ನು ಆವಾಹಿಸಿ ಅಘೋರಬಲಿಯಲ್ಲಿ ಉಚ್ಛಾಟಿಸಲಾಯ್ತು.
ದೈವತಾ ಕಾರ್ಯದಲ್ಲಿ ಜ್ಯೋತಿಷಿಗಳಾದ ಪಯ್ಯನ್ನೂರು ನಾರಾಯಣ ಪೊದುವಾಳ್, ಮಿತ್ತೂರು ಕೇಶವ ಭಟ್ , ದೇವಾಲಯ ಶಿಲ್ಪಿಗಳಾದ ಮಹೇಶ್ ಮುನಿಯಂಗಳ , ಆಚಾರ್ಯರಾದ ಶಂಕರ ಭಟ್ , ದೇವಾಲಯದ ಮೊಕ್ತೇಸರರಾದ , ಅಮ್ಮುಂಜೆಗುತ್ತು ಡಾ .ಮಂಜಯ್ಯ ಶೆಟ್ಟಿ, ಉಳಿಪ್ಪಾಡಿಗುತ್ತು ತಾರಾನಾಥ್ ಆಳ್ವ, ಚೇರ ಸೂರ್ಯನಾರಾಯಣ ರಾವ್, ಪವಿತ್ರಪಾಣಿ ಮಾಧವ ಭಟ್ ಮತ್ತು ಕುಟುಂಬಿಕರು , ನಾರಾಯಣ ಭಟ್ ಕುಟುಂಬಿಕರು , ಕಾರ್ಯನಿರ್ವಹಣಾಕಾರಿ ಪ್ರವೀಣ್ , ಕಡ್ತಾಲಬೆಟ್ಟು ಗುತ್ತು ಕೃಷ್ನ ಶೆಟ್ಟಿ ಕುಟುಂಬಿಕರು,ದೈವದ ಪಾತ್ರಿ ಕೃಷ್ಣಮೂರ್ತಿ ಅತಿಕಾರಿ, ದೇವಾಲಯದ ಅರ್ಚಕ ವೃಂದ , ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಸಾವಿರ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು .
ನಾನು ಯಾರು?’’ ಎಂದು ವಿಚಾರಿಸಿ ತನ್ನ ಯಥಾರ್ಥ ಸ್ವರೂಪವನ್ನು ಅರಿತುಕೊಳ್ಳುವುದೇ ಮುಕ್ತಿ.