ಚಿಕ್ಕಮಗಳೂರು ವಿದ್ಯಾರ್ಥಿನಿ ಕೊಲೆ ಪ್ರಕರಣ: ಆರೋಪಿ ಬಂಧನ
ಮಂಗಳೂರು: ಉಜಿರೆಯಲ್ಲಿ ಎಂಎಸ್ಸಿ ಮುಗಿಸಿ, ಮಂಗಳೂರಿನಲ್ಲಿ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ತರಬೇತಿಗೆ ಬಂದಿದ್ದ, ಚಿಕ್ಕಮಗಳೂರು ತರಿಕೇರಿ ಮೂಲದ ಅಂಜನಾ ವಷಿಷ್ಠ ಎನ್ನುವ ಯುವತಿ ಮಂಗಳೂರಿನ ಅತ್ತಾವರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಶುಕ್ರವಾರ ಬೀಕರ ರೀತಿಯಲ್ಲಿ ಕೊಲೆಯಾಗಿದ್ದಳು.
ಪ್ರಕರಣದ ಆರೋಪಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಂದೀಪ್ ರಾಥೋಡ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಕರೆತರಲಾಗಿದೆ.