ಬಂಟ್ವಾಳ ಅತ್ಯಾಚಾರ ಪ್ರಕರಣಕ್ಕೆ ಎಬಿವಿಪಿಯಿಂದ ವಕೀಲರಿಗೆ ಮನವಿ ಸಲ್ಲಕೆ
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಗೂಡಿನಬಳಿ ಪರಿಸರದಲ್ಲಿ ನಡೆದ ಬಾಲಕಿಯ ಮೇಲಿನ ದೌರ್ಜನ್ಯ ಅತ್ಯಾಚಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿಗಳು ಬಂಟ್ವಾಳ ವಕೀಲರ ಸಂಘಕ್ಕೆ ಆರೋಪಿಗಳ ಪರ ವಕಾಲತು ಮಾಡದಂತೆ ಮನವಿ ಸಲ್ಲಿಸಿದ್ದಾರೆ.
ಇಂತಹ ಪೈಶಾಚಿಕ ಕೃತ್ಯ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಮತ್ತು ಸದಾ ನ್ಯಾಯಕ್ಕೋಸ್ಕರ ಪರಿಕ್ರಮಿಸುವ ಬಂಟ್ವಾಳದ ವಕೀಲರ ಸಂಘದ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದಾರೆ.