ಬಂಟ್ವಾಳ : ರಾಜ್ಯ ಬಿಜೆಪಿ ಅಧ್ಯಕ್ಷ , ಸಂಸದ ಬಿ.ಯಸ್.ಯಡಿಯೂರಪ್ಪ ಜು. 13ರಂದು ರಾ.ಸ್ವ.ಸಂಘದ ಕಾರ್ಯಕರ್ತ, ದುಷ್ಕರ್ಮಿಗಳಿಂದ ಹತ್ಯೆಯಾದ ಶರತ್ ಮನೆಗೆ ಭೇಟಿ ನೀಡಿದ ಸಂದರ್ಭ ಸಜೀಪಮೂಡ ಕಂದೂರು ಶ್ರೀ ಕೃಷ್ಣ ಶಿಶು ಮಂದಿರಕ್ಕೆ ಭೇಟಿ ಅಲ್ಲಿನ ಪುಟಾಣಿಗಳ ಜೊತೆ ಒಂದಷ್ಟು ಹತ್ತು ಕಳೆದರು.ರಾ.ಸ್ವ.ಸಂಘದ ಡಾ| ಪ್ರಭಾಕರ ಭಟ್, ಸಂಸದರಾದ ನಳಿನ್ ಕುಮಾರ್ ಕಟೀಲು, ರಾಜ್ಯ ಬಿಜೆಪಿ ಪ್ರ.ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಬ್ರಿಜೇಶ್ ಚೌಟ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ಪ್ರಮುಖರಾದ ಜಯಶಂಕರ ಬಾಸ್ರಿತ್ತಾಯ, ಯಶವಂತ ದೇರಾಜೆ, ಎಂ. ಸುಬ್ರಹ್ಮಣ್ಯ ಭಟ್, ಸುರೇಶ್ ದೇರಾಜೆ, ಗ್ರಾ.ಪಂ. ಸದಸ್ಯರಾದ ನವೀನ್, ಪ್ರವೀಣ್ ಗಟ್ಟಿ, ಪ್ರಮೀಳಾ ಗಟ್ಟಿ, ಮಾತಾಜಿ ಚಂದ್ರಕಲಾ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.
