ಸುದ್ದಿ9 ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಒಂಭತ್ತನೇ ದಿನದ ಪಾದಾಯಾತ್ರೆಗೆ ಬುಧವಾರ ಬೆಳಿಗ್ಗೆ ಮೂಜರ್ೆಯಿಂದ ಚಾಲನೆ ನೀಡಲಾಯಿತು. ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ಕಾವಳಮೂಡೂರು ಮತ್ತು ಕಾವಳಪಡೂರು ಗ್ರಾಮಗಳಲ್ಲಿ ಸಂಚರಿಸಿತು.
ಒಂಭತ್ತನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಮುಖರಾದ ಪುರುಷ ಸಾಲ್ಯಾನ್ ನೆತ್ತರಕೆರೆ, ತುಂಗಪ್ಪ ಬಂಗೇರ, ಪ್ರಥ್ವಿರಾಜ್, ದೇವದಾಸ್ ಶೆಟ್ಟಿ, ರಾಮ್ದಾಸ್ ಬಂಟ್ವಾಳ, ಅಬ್ದುಲ್ ರಝಾಕ್, ರಮಾನಾಥ ರಾಯಿ, ಮೋಹನ್ ಆಚಾರ್ಯ, ಶಂಕರ ಶೆಟ್ಟಿ, ರಾಜಗೋಪಾಲ್, ದಾಮೋದರ ಪ್ರಭು ಮತ್ತಿತರರು ಹಾಜರಿದ್ದರು.

