ಕೈಕಂಬ: ಬೈಲು ಏತಮೊಗರು ದೊಡ್ಡಮನೆಯಲ್ಲಿ ಏಪ್ರೀಲ್ 28ರಂದು ಶನಿವಾರ ಮತ್ತು ಭಾನುವಾರ ಮಾಗಣೆಯ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳಿಗೆ ಧರ್ಮನೇಮೋತ್ಸವದ ಸೇವೆ ನಡೆಯುವ ಬಗ್ಗೆ ಫ್ರೆಬ್ರವರಿ 4 ರಂದು ಭಾನುವಾರ ಸಂಜೆ 4. ಗಂಟೆಗೆ ಬೈಲು ಮಾಗಣೆ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಪೂರ್ವಭಾವಿ ಸಮಾಲೋಚನ ಸಭೆಯನ್ನು ಕರೆಯಲಾಗಿದೆ.
ಆಪ್ರಯುಕ್ತ ಮಾಗಣೆಯ ನಾಲ್ಕು ಗುತ್ತಿನವರು,ಮನೆತನದವರು, ಧಾರ್ಮಿಕ ಮುಖಂಡರು,ಸಂಘ ಸಂಸ್ಥೆಗಳು ಪ್ರಮುಖರು ಮತ್ತು ಬೈಲು ಮಾಗಣೆಯ ಸಮಸ್ತ ಭಕ್ತ ಭಾಂದವರು ಉಪಸ್ಥಿತವಿದ್ದು ಧರ್ಮನೇಮೋತ್ಸವ ಸೇವ್ ಮತ್ತು ಇತರ ಕಾರ್ಯಕ್ರಮಗಳ ಯಶಸ್ವಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಈ ಮೂಲಕ ವಿನಂತಿಸುವ ಕೆ. ಸುಂದರ ಆಳ್ವ ಕಂದಾವರ ಬಾಳಿಕೆ ಆಡಳಿತ ಮೊಕ್ತೇಸರ ,ಹಾಗೂ ಹರೀಶ್ ಶೆಟ್ಟಿ ಬೈಲು ಏತಮೊಗರು ದೊಡ್ಡಮನೆ.ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
