ಕೈಕಂಬ: ಗಂಜಿಮಠ ಗ್ರಾಮ ಪಂಚಾಯತಿಯ ಬಡಗುಳಿಪಾಡಿ ಗ್ರಾಮದ ನಾಲ್ಕನೇ ವಾರ್ಡಿನ ಸೌಹಾರ್ದನಗರ ಬಾಕಿಮಾರ್ ಕಾಂಕ್ರೀಟಿಕರಣ ರಸ್ತೆಯನ್ನು ಉದ್ಘಾಟನೆಯನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ.ಮೊೈದೀನ್ ಬಾವಾ ನೆರವೇರಿಸಿದರು.
ಗುರುಪುರ ಜಿಲ್ಲಾ ಪಂ ಸದಸ್ಯ ಯು.ಪಿ.ಇಬ್ರಾಹಿಂ, ತಾ.ಪಂ.ಸದಸ್ಯ ಜಿ. ಸುನೀಲ್, ಗಂಜಿಮಠ ಗ್ರಾ. ಪಂ. ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಝಾಕೀರ್,ಮಾ.ಜಿ.ಪಂ.ಸದಸ್ಯ ಕೃಷ್ಣ ಅಮೀನ್, ಗ್ರಾ.ಪಂ.ಸದಸ್ಯರಾದ ಬೂಬ ಪೂಜಾರಿ, ದಾಮೋದರ್ ಕುಲಾಲ್, ಪಾರ್ವತಿ, ದೇವಕಿ ಬಲ್ಲಾಲ್ ಮತ್ತಿತರರು ಉಪಸ್ಥಿತರಿದ್ದರು.
