ಬಜ್ಪೆ: ಕಬೀರ್ ಕೊಲೆ ನಡೆದು ಅದೆಷ್ಟೋ ದಿನಗಳು ಕಳೆದವು , ಮೆಲ್ಲನೆ ತನಿಖೆಯೂ ಪ್ರಾರಂಭವಾಯಿತು ಮೊದಲಿಗೆ ಜನಾಕ್ರೋಶಕ್ಕೆ ಮಣಿದು ಸರಕಾರ ನವೀನ ನಾಯಕ್ ನನ್ನು ತನಿಖೆಗೆ ಒಳಪಡಿಸಿದರೂ ನಂತರ ಪೋಲಿಸ್ಗಳಿಂದ ಬೇರೆನೆ ವರದಿಯನ್ನು ಸಿದ್ಧಪಡಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಜ್ಪೆ ವಲಯದ ಪ್ರಧಾನ ಕಾರ್ಯದಶರ್ಿ ಮೊಹಮ್ಮದ್ ರಿಯಾಜ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆಪಾದಿಸಿದ್ದಾರೆ.
ಮಾಧ್ಯಮಗಳಲ್ಲಿ ಕಂಡು ಬರುವ ರಿಪೋಟರ್್ ನೋಡಿದರೆ ಕಬೀರ್ ಪೊಲೀಸರಿಂದ ತಪ್ಪಿಸಲು ಯತ್ನಿಸಿದಾ ಬೆನ್ನಿಗೆ ಗುಂಡು ದೂರದಿಂದ ಗುಂಡು ಹಾರಿಸಲಾಯಿತು ಎಂದಿದೆ. ಪೋಸ್ಟ್ ಮಾರ್ಟಂ ನಡೆದು ಅದೆಷ್ಟೋ ದಿನಗಳು ಕಳೆದಿದ್ದು ಆದರೆ ಇಂತಹ ವರದಿಯು ಇಂದು ಹೊರ ಬರಬೇಕಾದರೆ ಇದರ ಹಿಂದೆ ಅಡಗಿರುವ ರಹಸ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಇದು ಸಂಘಪರಿವಾರ ಹಾಗು ಕಾಂಗ್ರೆಸ್ ಸರಕಾರದ ಜಂಟಿ ಕಾಯರ್ಾಚರಣೆಯ ಫéಲ, ಇಂದು ಬಂದ ಪ್ರಾರ್ಥಮಿಕ ವರದಿಯು ನೋಡಿದರೆ ಇದು ಕಾಂಗ್ರೆಸ್ ಸರಕಾರ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ತನನ್ನು ಗೆಲ್ಲಿಸಿದ ಸಂಘಪರಿವಾರದ ಋಣ ತೀರಿಸಿದಂತೆ ಕಾಣುತ್ತಿದೆ. ಜಗದೀಶ್ ಶೆನವ ಹಾಗು ಸುನಿಲ್ ಕುಮಾರ್ ನಂತಹ ಕೋಮುವಾದಿಗಳು ಇಂದು ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ, ಅವರ ಪ್ರತಿಭಟನೆಗಳಿಗೆ ಮಣಿದು ಸರಕಾರ ತಾನೇನೂ ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದೆ. ಅದೇನೂ ಇರಲಿ ಒಂದಂತು ಸರಕಾರ ನೆನಪಿನಲ್ಲಿಟ್ಟುಕೊಳ್ಳಲಿ, ನಿಮ್ಮ ಮೊಸಳೆಗಣ್ಣೀರು ಇನ್ನು ನಡೆಯದು, ಸಾಕು ಸಂಘಪರಿವಾರದ ಗುಲಾಮಗಿರಿ ಒಂದು ವೇಳೆ ತನಿಖೆಯು ದಿಕ್ಕು ತಪ್ಪಿದರೆ ಮುಂದಿನ ದಿನಗಳಲ್ಲಿ ನಾವು ಜನಾಂದೋಲನ ನಡೆಸಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

