ಫರಂಗಿಪೇಟೆ: ಪುದು ಗ್ರಾಮದ ಸುಜೀರು ಸಾನದ ಬಳಿಯ ಕಾಲು ದಾರಿಯನ್ನು ಅಭಿವೃದ್ದಿ ಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರಿ ಕೆ ಎ ಯವರ ಅನುದಾನ ಮತ್ತು ಸಂಸದರ ಅನುದಾನದಿಂದ ಸಂಚಾರ ಯೋಗ್ಯಗೊಳಿಸಲು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಕ್ಷೇತ್ರ ಬಿ ಜೆ ಪಿ ಅದ್ಯಕ್ಷರಾದ ಶ್ರೀ ಚಂದ್ರಶೇಖರ ಉಚ್ಚಿಲ , ಯಶವಂತ ಅಮೀನ್ , ಚರಣ್ , ಮನೋಜ್ ಆಚಾರ್ಯ ,ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು , ದಿನೇಶ್ ಆರ್ ಶೆಟ್ಟಿ , ಶಾಂತ ಡಿ ಚೌಟ, ಸುಬ್ರಮಣ್ಯ ರಾವ್ , ಪ್ರತಾಪ್ ಆಳ್ವ ಮತ್ತಿತರರು ಉಪಸ್ತಿತರಿದ್ದರು




