ಬಂಟ್ವಾಳ ತಾಲೂಕಿನ ಮಂಗಳೂರು ಕ್ಚೇತ್ರದ ಮೇರಮಜಲು ಗ್ರಾಮ ಪಂಚಾಯತ್ ಇತ್ತಿಚೇಗೆ ನಡೆದ ಚುನಾವಣೆಯಲ್ಲಿ 12 ಜನ ಸದಸ್ಯರಲ್ಲಿ 8 ಬಿ ಜೆ ಪಿ ಬೆಂಬಲಿತ ಸದಸ್ಯರು ಜಯಭೇರಿಗಳಿಸಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕೊಡ್ಮಾಣ್ ಕೋಡಿ ಸತೀಶ್ ನಾಯ್ಕ ಅಧ್ಯಕ್ಷರಾಗಿ ಉಪಧ್ಯಕ್ಷೆ ಸ್ಥಾನವನ್ನು ಜಯಶ್ರೀ ಕರ್ಕೇರಾ ಅವರು ಅಲಂಕರಿಸಿದ್ದಾರೆ.ಸದಸ್ಯರಾಗಿ ಪದ್ಮನಾಭ ಶೆಟ್ಟಿ ಕೊಟ್ಟಿಂಜ,ದಯಾನಂದ ಕಾಫಿಕಾಡ್, ನಳಿನಾಕ್ಷಿ, ಗಿರಿಜಾ ನಾಯಿಕ್,ರವೀಂದ್ರ ಅಬೆಟ್ಟು,ಅರುಣಾ ಕೆ., ಇವರು ಆಯ್ಕೆಯಾಗಿದ್ದಾರೆ.

ಅಭಿನಂದನಾ ಸಭೆಯಲ್ಲಿ ಶ್ರೀಮಾನ್ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಪುದು ಜಿ. ಪಂ. ಸದಸ್ಯೆ ಜಯಶ್ರೀ ಕೆ.ಎ.,ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ಯಲಜ ಪಿ ಶೆಟ್ಟಿ, ದ.ಕ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮೀ ಕಿಲ್ಲೆ ಅವರು ಪಸ್ಥಿತರಿದ್ದರು.



