ಫರಂಗಿಫೇಟೆ: ವಿಶ್ವ ಯೋಗ ದಿನಾಚರಣೆ ಯ ಅಂಗವಾಗಿ ಪುದು ಗ್ರಾಮದ ಮಾರಿಪಲ್ಲ ಕುಲಾಲ ಭವನದಲ್ಲಿ ಹಮ್ಮಿಕೊಂಡ ವಿಶ್ವಯೋಗ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಗುರುಗಳಾದ ಎ ದೇವರಾಜ ಪ್ರಭು ಇವರು ಜೂ. 21ರಂದು ಭಾನುವಾರ ಯೋಗದ ಮಾಗದರ್ಶನ ನೀಡಿ ಅಭ್ಯಾಸವರ್ಗ ಮಾಡಿಸಿದರು . ಈ ಸಂದರ್ಭ ದಲ್ಲಿ ಉದ್ಯಮಿ ಚಂದ್ರಶೇಕರ ತೇಜ , ಭರತ್ , ಪುರಂದರ ಬಲ್ಯಾಯ .ವಿನಯ್ ಹಾಗೂ ಹಲವಾರು ಮಂದಿ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.

