ಕಿನ್ನಿಗೋಳಿ: ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಶ್ರೀ ಅರಸು ಕುಂಜಿರಾಯರಿಗೆ ಕುಡ್ತಿಮಾರು ಗುತ್ತು ಶ್ರೀಮತಿ ಮತ್ತು ಶ್ರೀ ರಾಜೇಂದ್ರ ಕೆ ಶೆಟ್ಟಿ ಇವರ ಸೇವಾರೂಪದ ಬೆಳ್ಳಿ ಕಿರೀಟ ಮತ್ತು ಅಖೀಲಾಂಡೇಶ್ವರಿ ದೇವರಿಗೆ ಅತ್ತೂರು ಕೊಜಪಾಡಿ ಬಾಳಿಕೆ ಶ್ರೀಮತಿ ಮತ್ತು ಶ್ರೀ ಜಯ ಶೆಟ್ಟಿ ಮತ್ತು ಮಕ್ಕಳು ಹಾಗೂ ಕುಡ್ತಿಮಾರ್ ಗುತ್ತು ದಿ. ಪ್ರಖ್ಯಾತ್ ಆರ್ ಶೆಟ್ಟಿಯವರ ಸ್ಮರಣಾರ್ಥ ಅವರ ಅಜ್ಜಿ ತಾಯಿ ಚಿಕ್ಕಮ್ಮ ಇವರ ಸೇವಾ ರೂಪದ ಬೆಳ್ಳಿಯ ಕವಚ ಹಾಗೂ ಪ್ರಭಾವಳಿಯನ್ನು ಸಮರ್ಪಿಸಲಾಯಿತು.


