ಬಂಟ್ವಾಳ: ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ, ಬಂಟವಾಳ ಇದರ ಅಶ್ರಯದಲ್ಲಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಶ್ರೀ ದೇವಳದ ವಠಾರದಲ್ಲಿ ನಡೆಯುವ ಯಕ್ಷಗಾನ ತಾಳಮದ್ದಳೆಯ ಸಮಾರೋಪ,ವಾರ್ಷಿಕೋತ್ಸವ,

ಸನ್ಮಾನ ಸಮಾರಂಭ ಸೆ. 06 ರಂದು ಮಧ್ಯಾಹ್ನ  1ಗಂಟೆಗೆ ನಡೆಯಲಿದೆ.
ಈ ಸಂದರ್ಭ ಹಿರಿಯ ಹಿಮ್ಮೇಳ ವಾದಕರಾದ ಲಕ್ಷ್ಮೀಶ ಅಮ್ಮಣ್ಣಾಯಸನ್ಮಾನಿಸಲಾಗುವುದು
ನಿವೃತ್ತ ಅಂಚೆಪಾಲಕರು, ಯಕ್ಷಗಾನ ಪೋಷಕರಾದ ಭಾಸ್ಕರ ರಾವ್ ಕಾರಾಜೆ ಹಾಗೂ ದೇವಳದ ಆಡಳೊತ ಮೊಕ್ತೇಸರರಾದ  ಅಶೋಕ ಶೆಣೈ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಳಿಕ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಅತಿಕಾಯ ಮತ್ತು ಭೃಗುಶಾಪ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *