Published On: Tue, Jun 11th, 2024

ಮೂಲರಪಟ್ಣ ಜಿಎಚ್‌ಎಂ ಫೌಂಡೇಷನ್ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, ವಿದ್ಯಾರ್ಥಿಗಳಿಗೆ ಸನ್ಮಾನ,ಕಾರ್ಯಾಗಾರ


ಬಂಟ್ವಾಳ: ಜಿಎಚ್‌ಎಂ ಫೌಂಡೇಷನ್ ಮೂಲರ ಪಟ್ಣ  ಇದರ ವತಿಯಿಂದ ಬೈತುಲ್‌ಹುದಾ  ಏಳನೆ ಯೋಜನೆಯಾಗಿ ನಿರ್ಮಾಣಗೊಳ್ಳುತ್ತಿರುವ ನೂತನ  ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಮೂಲರ ಪಟ್ನದ ಆಝಾದ್ ನಗರದಲ್ಲಿ ನಡೆಯಿತು.


ಮುಹಿಯುದ್ದೀನ್ ಜುಮ್ಮಾ ಮಸೀದಿ ಮೂಲರಪಟ್ಣ ಇದರ ಖತೀಬರಾದ ಅಲ್ ಹಾಜ್ ಮೊಹಮ್ಮದ್ ಶೆರೀಫ್ ದಾರಿಮಿ ದುವಾಃ ನೆರವೇರಿಸಿ ನೂತನ ಮನೆಗೆ ಶಂಕು ಸ್ಥಾಪನೆ ನೆರವೇರಿಸಿದರು. ಬಳಿಕ ಶಭಾರ್ಶಿರ್ವಾದಗೈದು ಶೀಘ್ರದಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳಲಿ ಎಂದರು.  ಮಾಜಿ ಖತೀಬರಾದ ಅಲ್ ಹಾಜ್ ಅಬ್ದುಲ್ ಖಾದರ್ ಮದನಿ ಉಪಸ್ಥಿತರಿದ್ದರು.


ಈ ಸಂದರ್ಭ ವಿಶೇಷ ಆಹ್ವಾನಿತರಾಗಿದ್ದ   ತರಬೇತುದಾರ ರಫೀಕ್ ಮಾಸ್ಟರ್  ಮಾತನಾಡಿ ಜಿಎಚ್‌ಎಂ ಫೌಂಡೇಷನ್ ಆರಂಭವಾದಂದಿನಿಂದ ಇಂದಿನವರಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಫೌಂಡೇಷನ್ ಏಳು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳ ಪೈಕಿ ೩ ಮನೆಗಳನ್ನು ಈಗಾಗಲೇ ಪೂರೈಸಿದ್ದು ನಾಲ್ಕನೇ ಮನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ೩ ಹಳೆಯ ಮನೆಗಳನ್ನು ನವೀಕರಿಸಿ ಹೊಸ ರೂಪ ಕೊಡಲಾಗಿದೆ. ಜಿಎಚ್‌ಎಂ ಫೌಂಡೇಷನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು, ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಹಕಾರ, ಸ್ಥಳೀಯ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ಆರಂಭ ಮೊದಲಾದ ಶಿಕ್ಷಣಕ್ಕೆ ಪ್ರೇರಣೆ ನೀಡುವ ಕೆಲಸವನ್ನು ನಡೆಸಿ ಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಎಚ್‌ಎಂ ಫೌಂಡೇಷನ್ ಅಧ್ಯಕ್ಷ ಮೊಹಮ್ಮದ್ ಶಾಲಿ ಅಧ್ಯಕ್ಷತೆ ವಹಿಸಿ ಫೌಂಡೇಷನ್‌ನ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ  ಅಬ್ದುಲ್ ಸಲಾಂ, ಅಬ್ದುಲ್ ರಝಾಕ್ ಸಚ್ಚರಿಪೇಟೆ,
ರಿಯಾಝ್ ಕುಪ್ಪೆಪದವು, ಜಿ.ಎಚ್.ಎಮ್ ಫೌಂಡೇಶನ್‌ನ ಕಾರ್ಯಕ್ರಮ ಮುಖ್ಯಸ್ಥ ಎಮ್.ಬಿ.ಇಸ್ಮಾಯಿಲ್ ಶಾಫಿ ಮೂಲರಪಟ್ಣ, ಸ್ಥಾಪಕಾಧ್ಯಕ್ಷ ಹಂಝ ಗುತ್ತು ಮೂಲರಪಟ್ಣ, ಗೌರವ ಸಲಹೆಗಾರ ಝಕರಿಯಾ ಫರ್ವೀಝ್ , ಗಲ್ಪ್ ಪ್ರಮುಖರಾದ
ಮೊಹಮ್ಮದ್ ಕಬೀರ್, ಉಬೈದುಲ್ಲಾ ಅಝಾದ್ನಗರ, ನಿಝಾಮ್ ವಾರಟೀಲು, ಇರ್ಷಾದ್ ವಾರಟೀಲು, ಜಿ.ಎಚ್.ಎಮ್ ಫೌಂಡೇಶನ್ ಸದಸ್ಯರಾದ ಮೊಹಮ್ಮದ್ ತೌಹೀದ್ ಎಮ್ ಬಿ, ಮುನೀರ್ ಅಝಾದ್ನಗರ, ರಶೀದ್ ಕಾಜಿಗುಳಿ, ಶಾರೂಕ್ ಎಮ್ ಬಿ, ರಶೀದ್ ರೋಯಲ್, ಮುಸ್ತಪ ಹಿತ್ತಿಲು, ಬದ್ರುಲ್ ಕಮಲ್, ನಿಸಾರ್ ಏ.ಜಿ, ರಶೀದ್ ಎಮ್ ಬಿ, ಶಾಕೀರ್ ವಾರಟೀಲು ದಾರುಲ್ ಉಲೂಮ್ ಮದ್ರಸ ಮೂಲರಪಟ್ಣದ ಅಧ್ಯಕ್ಷ  ನಾಸಿರ್ ಎಮ್ ಪಿ, ಅಲ್ ಮದ್ರಸತುಲ್ ಮುಳರ್ರಿಯ್ಯಾ ತಾರೆಮಾರ್ ಅಧ್ಯಕ್ಷ  ಮೊಹಮ್ಮದ್ ಯೂಸುಫ್, ಶಿಬಿಯಾನ್ ಮದ್ರಸ ವಾರಟೀಲು ಇದರ ಅಧ್ಯಕ್ಷ  ಅಬ್ಬು ವಾರಟೀಲು, ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣದ ಕಾರ್ಯದರ್ಶಿ  ಶಿಹಾಬುದ್ದೀನ್ ಎಚ್, ಎಸ್‌ಕೆಎಸ್‌ಎಸ್‌ಎಫ್ ಅಝಾದ್‌ನಗರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಎಸ್‌ಕೆಎಸ್‌ಎಸ್‌ಎಫ್ ಮೂಲರ ಪಟ್ಣ ಘಟಕದ ಅಧ್ಯಕ್ಷ ಹೈದರ್ ಎಮ್ ಎಸ್, ಇಬ್ರಾಹಿಂ ಗುತ್ತು ಅಝಾದ್ ನಗರ, ಅಝಾದ್ ಲಯನ್ಸ್ ಹೆಲ್ಪ್ ಲೈನ್ ಅಝಾದ್ ನಗರ ಅಧ್ಯಕ್ಷ  ಅಶ್ರಫ್ ಎಂ.ಎ ಅಧ್ಯಕ್ಷರು ಅಝಾದ್ ಲಯನ್ಸ್ ಹೆಲ್ಪ್ ಲೈನ್ ಅಝಾದ್ ನಗರ, ಹಿರಿಯರಾದ ಇಬ್ರಾಹಿಂ ಅಝಾದ್ ನಗರ ಉಪಸ್ಥಿತರಿದ್ದರು.
ಬಳಿಕ ಜಿಎಚ್‌ಎಂ ಫೌಂಡೇಷನ್ ಇದರ ವತಿಯಿಂದ  ಮೂಲರಪಟ್ಣ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ  ಸನ್ಮಾನ ಕಾರ್ಯಕ್ರಮ  ಹಾಗೂ ಪೋಷಕರಿಗೆ ಮಾಹಿತಿ ಕಾರ್ಯಗಾರ ನಡೆಯಿತು. ಆಜಾದ್ ಮಾದರಿ ಶಾಲೆಯ ಪ್ರಾಂಶುಪಾಲೆ ಸುಪ್ರಿತಾ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಹಿನಾ  ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಮ್ ಎಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಎಚ್‌ಎಂ ಫೌಂಡೇಷನ್ ವತಿಯಿಂದ ನವೀಕರಣಗೊಂಡ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter