Published On: Tue, Dec 5th, 2023

ಬೆಂಜನಪದವು ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ ಭೇಟಿ

ಕೈಕಂಬ: ಬಂಟ್ವಾಳ ತಾಲೂಕಿನ ಬೆಂಜನಪದವು ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಹಿನ್ನೆಲೆ ಗಾಯಕ ರಾಜೇಶ್‌ ಕೃಷ್ಣನ್‌ ಹಾಗೂ ಕ್ಲಾಂತ ಚಿತ್ರ ತಂಡ ಭೇಟಿ ನೀಡಿದ್ದರು.

ಕ್ಷೇತ್ರದಲ್ಲಿ ಕನ್ನಡ ಕ್ಲಾಂತ ಚಿತ್ರದ ತುಳು ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ರಾಜೇಶ್‌ ಕೃಷ್ಣನ್‌ ತುಳು ಹಾಡನ್ನು ಹಾಡಿದ್ದು ಸ್ವತಃ ಅವರೇ ಕೊರಗಜ್ಜ ಕ್ಷೇತ್ರದಲ್ಲಿ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು.

ಕ್ಷೇತ್ರದ ಧರ್ಮದರ್ಶಿ ವಿಜಯ್‌ ಕೆ. ಅವರು ದೈವದ ಕರಿಗಂಧ ಪ್ರಸಾದವನ್ನು ಚಿತ್ರ ತಂಡ ಹಾಗೂ ರಾಜೇಶ್‌ ಕೃಷ್ಣನ್‌ ಗೆ ನೀಡಿದರು. ಬಳಿಕ ಬೆಂಜನಪದವು ಕೊರಗಜ್ಜ ಕ್ಷೇತ್ರ ಹಾಗೂ ಕ್ಲಾಂತ ಚಿತ್ರ ತಂಡದ ವತಿಯಿಂದ ರಾಜೇಶ್‌ ಕೃಷ್ಣನ್‌ ಅವರನ್ನು ಗೌರವಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter