ಹರಿಕಥಾ ಸಪ್ತಾಹದಲ್ಲಿ “ಗಿರಿಜಾ ಕಲ್ಯಾಣ” ಕಥಾನಕ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದಲ್ಲಿ ನ.9 ಗುರುವಾರದಂದು ಶ್ರದ್ಧಾ ಭಟ್ ನಾಯರ್ಪಳ್ಳ, ಅಲಮ ಇವರಿಂದ “ಗಿರಿಜಾ ಕಲ್ಯಾಣ” ಎಂಬ ಕಥಾನಕದ ಹರಿಕಥೆ ನಡೆಯಿತು.
ಹರಿಕಥಾ ವಾಚನದ ಸಂದರ್ಭದಲ್ಲಿ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ, ಆಶ್ರಮದ ಮಕ್ಕಳು, ಇನ್ನಿತರರು ಉಪಸ್ಥಿತರಿದ್ದು ಕಥಾ ಶ್ರವಣ ಮಾಡಿದರು.