ನವೀಕೃತ ಸಾರ್ವಜನಿಕ ಶೌಚಾಲಯ ಉದ್ಘಾಟನೆ
ವಾಮಂಜೂರು ರಿಕ್ಷಾ ಚಾಲಕರ ಸಂಘದ ಕಚೇರಿ
ಕೈಕಂಬ : ವಾಮಂಜೂರು ಜಂಕ್ಷನ್ನಲ್ಲಿರುವ ನೇತಾಜಿ ಆಟೋ ಚಾಲಕರ ಸಂಘ(ರಿ) ಇದರ ನೂತನ ಕಚೇರಿ ಹಾಗೂ ನವೀಕರಣಗೊಂಡ ಸುಸಜ್ಜಿತ ಸಾರ್ವಜನಿಕ ಶೌಚಾಲಯವನ್ನು ಆ. ೧೩ರಂದು ತಿರುವೈಲು ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಉದ್ಘಾಟಿಸಿದರು.

ವಾಮಂಜೂರು ಜಂಕ್ಷನ್ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಸಂಘದ ಕಚೇರಿ ನಿರ್ಮಿಸಲು ಸಹಕರಿಸಿದ ಲಯನ್ಸ್ ಕ್ಲಬ್ ಕಾವೂರು ಪದಾಧಿಕಾರಿಗಳು, ಆಟೋ ರಿಕ್ಷಾ ಚಾಲಕರು, ಮಾಲಕರು, ದಾನಿಗಳನ್ನು ಅಭಿನಂದಿಸಲಾಯಿತು. ನೇತಾಜಿ ಆಟೋ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಮತ್ತು ಕೋಶಾಧಿಕಾರಿ ಹರೀಶ್ ಕುಮಾರ್ ಅವರನ್ನು ಸಂಘದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಲಯನ್ಸ್ ಕ್ಲಬ್ ಕಾವೂರು ಮಂಗಳೂರು ಇದರ ಅಧ್ಯಕ್ಷ ಸತೀಶ್ ಶೆಟ್ಟಿ ಕಡಂಬಿಲ, ಉದ್ಯಮಿ ಮೋಹನದಾಸ್ ಶೆಟ್ಟಿ, ಜಯಪ್ರಕಾಶ್(ಜೆ.ಪಿ), ಉದ್ಯಮಿ ರಿಯಾಝ್ ವಾಮಂಜೂರು, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ದಿನೇಶ್ ಜೆ. ಕರ್ಕೇರ ಸಾನದಮನೆ, ಕಂಕನಾಡಿ ಗ್ರಾಮಾಂತರ(ವಾಮAಜೂರು) ಪೊಲೀಸ್ ಠಾಣೆಯ ಎಸ್ಐ ಕಮಲಾ, ಉದ್ಯಮಿ ಆನಂದ ಶೆಟ್ಟಿಗಾರ ವಾಮಂಜೂರು, ಜೈಶಂಕರ್ ಮಿತ್ರ ಮಂಡಳಿಯ ಅಧ್ಯಕ್ಷ ದಿವಾಕರ ಆಚಾರ್ಯ, ಅಲ್ಫೋನ್ಸ್ ಡಿ’ಸೋಜ, ದಕ್ಷಿಣ ಕನ್ನಡ ಆಟೋ ರಿಕ್ಷಾ ಯೂನಿಯನ್ನ ಅಧ್ಯಕ್ಷ ವಿಷ್ಣುಮೂರ್ತಿ, ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ರಿಕ್ಷಾ ಚಾಲಕ ರಮೇಶ್ ಗುರುಪುರ ನಿರೂಪಿಸಿದರು.

ಬಾಕ್ಸ್ :
ರಿಕ್ಷಾ ಚಾಲಕರ ಸಾಧನೆ :
ಮನಪಾ ಸಹಕಾರದಲ್ಲಿ ಕಾವೂರು ಲಯನ್ಸ್ ಕ್ಲಬ್ನವರು ನಿರ್ಮಿಸಿದ್ದ ಈ ಶೌಚಾಲಯವು ನಿರ್ವಹಣೆ ಕೊರತೆಯಿಂದ ಕೆಲವು ವರ್ಷದಿಂದ ಪಾಳು ಬಿದ್ದಿತ್ತು. ಇದೀಗ ಲಯನ್ಸ್ ಕ್ಲಬ್ನವರು ಈ ಕಟ್ಟಡವನ್ನು ರಿಕ್ಷಾ ಚಾಲಕರ ಸಂಘಕ್ಕೆ ಹಸ್ತಾಂತರಿಸಿದ್ದು, ಅಭಿವೃದ್ಧಿ ಹೊಂದುತ್ತಿರುವ ವಾಮಂಜೂರಿನಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆ ನೀಗಿದಂತಾಗಿದೆ. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಮುಂದಾಳತ್ವದಲ್ಲಿ ಶೌಚಾಲಯ ಮತ್ತು ಸಂಘದ ನೂತನ ಕಚೇರಿ ನಿರ್ಮಾಣಗೊಂಡಿದೆ. ಸಂಘದ ಮೂಲಕ ನಿರ್ವಹಿಸಲಿರುವ ಈ ಶೌಚಾಲಯಕ್ಕೆ ಕೆಲಸಗಾರಿಬ್ಬರನ್ನು ನಿಯುಕ್ತಿಗೊಳಿಸಲಾಗಿದೆ.