ಶ್ರೀಲಂಕಾಗೆ ಬೆಂಬಲ ಬೇಕು, ಅನಗತ್ಯ ಒತ್ತಡ ಅಲ್ಲ- ಚೀನಾವನ್ನು ತರಾಟೆಗೆ ತೆಗೆದುಕೊಂಡ ಭಾರತ
ಕೊಲಂಬೋ: ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ಚೀನಾ ತನ್ನ ಹೈಟೆಕ್ ಹಡಗನ್ನು ನಿಲ್ಲಿಸಿದ್ದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರಕ್ಕೆ ಚೀನಾ ಭಾರತದ ಕುರಿತು ಟೀಕೆಗಳನ್ನು ಮಾಡಿದ್ದು, ಇದೀಗ ಭಾರತವೂ ಚೀನಾಗೆ ಟಾಂಗ್ ನೀಡಿದೆ.
ಭಾರತದ ದೃಷ್ಟಿಕೋನ ಹೇಗಿದೆ ಎಂಬುದನ್ನು ಅದರ ವರ್ತನೆಯಿಂದಲೇ ಬಣ್ಣಿಸಬಹುದು ಎಂದು ಚೀನಾದ ರಾಯಭಾರಿ ಕ್ವಿ ಝೆನ್ಹಾಂಗ್ ಹೇಳಿಕೆ ನೀಡಿದ್ದರು. ಇದಕ್ಕೆ ಚೀನಾವನ್ನು ತರಾಟೆಗೆ ತೆಗೆದುಕೊಂಡ ಭಾರತ, ಇದೀಗ ಶ್ರೀಲಂಕಾಗೆ ಬೇಕಾಗಿರುವುದು ಬೆಂಬಲ. ಅನಗತ್ಯ ಒತ್ತಡ ಅಥವಾ ವಿವಾದವಲ್ಲ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಹೇಳಿದೆ.