ಪೊಳಲಿ: ಕರಿಯಂಗಳ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ನೇಮೋತ್ಸವದಂದು ಕಾಂಕ್ರೀಟಿಕರಣಗೊಂಡ ರಸ್ತೆಯ ಉದ್ಘಾಟನೆ. ಶ್ರೀ ದೈವಸ್ಥಾನಕ್ಕೆಸಂಪರ್ಕಿಸುವ ಮುಖ್ಯರಸ್ತೆಗೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ರೂ 10 ಲಕ್ಷ ಅನುದಾನ ಒದಗಿಸಿಕೊಟ್ಟ ಶಾಸಕರನ್ನು ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಸಮಿತಿಯ ಸದಸ್ಯರು ಸನ್ಮಾನಿಸಿದರು.

ಶಾಸಕರೊಂದಿಗೆ ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ನಂದಪ್ಪ ರೈ, ಗಂಗಯ್ಯ ಕೋಟ್ಯಾನ್ ನಡುಮನೆ, ರಾಜು ಕೋಟ್ಯಾನ್ ನಡುಮನೆ, ಗೋಪಾಲ ಪೂಜಾರಿ, ಯಶವಂತ ಪೂಜಾರಿ ,ವಸಂತ ದೋಟ, ಜಗದೀಶ್, ಕಿಶೋರ್ ಪಲ್ಲಿಪಾಡಿ, ರೋಶನ್ ಗರೋಡಿ, ಲೋಕೇಶ್ ಭರಣಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
