ಕೈಕಂಬ: ಬೆಳ್ಳೂರು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ದೇವಿಯ ಬಿಂಬ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಾಂಕೇತಿಕವಾಗಿ ನೆರವೇರಿದ ಮರುದಿನ ಮಂಗಳವಾರ ಶ್ರೀ ಕಾವೇಶ್ವರ ದೇವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ ಸಂಜೆ ಕೊಡಮಣಿತ್ತಾಯ ಮತ್ತು ಸತ್ಯದೇವತೆ ಗಳಿಗೆ ನೇಮೋತ್ಸವ ನಡೆಯಿತು .
ಬಳಿಕ ಮಹಮ್ಮಾಯಿ ದೇವಿಯ ಮತ್ತು ಮಾಡ್ಲಾಯ ದೈವದ ದರ್ಶನ ಸೇವೆ ನಡೆಯಿತು. ವಾರ್ಷಿಕ ಮಾರಿ ಪೂಜೆಯ ಪ್ರಯುಕ್ತ ಮಾರಿ ಒಡಿಸುವ ( ಮಾರಿ ಗಿಡಪುನು) ಕಾರ್ಯಕ್ರಮ ನಡೆಯಿತು .
ಈ ಸಂದರ್ಭದಲ್ಲಿ ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ ಮತ್ತು ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.


