ಕೈಕಂಬ: ಬೆಳ್ಳೂರು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಎ.೨೬ರಂದು ಸೋಮವಾರ ಶ್ರೀ ದೇವಿಯ ಬಿಂಬ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸರಳ ರೀತಿಯಲ್ಲಿ ಸಾಂಕೇತಿಕವಾಗಿ ನೇರವೇರಿತು.
ಪೂರ್ವ ನಿಗದಿಯಂತೆ ಕೆಲವೇ ದಿನಗಳು ಬಾಕಿ ಇರುವಾಗ ಕೊರೋನ ಮಾರಿಯಿಂದಾಗಿ ಸರಕಾರದ ನಿಯಮದಂತೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಿ ಕೇವಲ ದೇವತಾ ಕಾರ್ಯಗಳಿಗೆ ಸೀಮಿತ ಗೊಂಡ ಕಾರ್ಯಕ್ರಮದಲ್ಲಿ ಶ್ರೀ ದೇವಿಯ ಬಿಂಬ ಪುನರ್ ಪ್ರತಿಷ್ಠೆ ಬ್ರಹ್ಮಕಲಶ ಚಂಡಿಕಾ ಯಾಗ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ತಂತ್ರಿಗಳಾದ ನಡುವಂತಾಡಿ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಣ್ಣಾಯ, ಪ್ರಕಾಶ್ ಭಟ್ ಅರ್ಚಕರು,ಶ್ರೀನಿವಾಸ ದಾಸ, ಚಂದ್ರಶೇಖರ ಅಜಿಲ, ವ್ಯವಸ್ಥಾಪನ ಸಮಿತಿಯ ಬಾರಿ ಭಂಡಾರಿ ಬೆಳ್ಳೂರು, ಗಂಗಾಧರ ಪೂಜಾರಿ ಕೊಪ್ಪಳ,ರಘುರಾಮ್ ಭಟ್ ಭಟ್ರಕೋಡಿ,ಗೋಪಾಲಕೃಷ್ಣ ಶೆಟ್ಟಿ, ದಿವಾಕರ ನಾಯ್ಕ್, ಸವಿತಾ ಎನ್ ಶೆಟ್ಟಿ, ಜಯರಾಮ ಶೆಟ್ಟಿ, ವೀಣಾ ಎಲ್ ಭಟ್ ಕೋಡಿ,ಗೌರವಾಧ್ಯಕ್ಷ ಪದ್ಮನಾಭ ಪಯ್ಯಡೆ, ದೇವಪ್ಪ ಪೂಜಾರಿ ಬಾಳಿಕೆ, ರಘುನಾಥ ಪಯ್ಯಡೆ, ಸೀತಾರಾಮ ಪೂಂಜ , ಕರುಣಾಕರ ಶೆಟ್ಟಿ, ಗಂಗಾಧರ ರೈ, ನರೇಂದ್ರನಾಥ್ ಭಂಡಾರಿ, ವಿಶ್ವನಾಥ ಅಳ್ವ ಗುಂಡಾಲ, ,ಮೋಹನ್ದಾಸ್ ಮೇಲಾಂಟ, ಪ್ರಕಾಶ್ ಆಳ್ವ, ನಂದರಾಮ ರೈ, ಉಮೇಶ್ ಶೆಟ್ಟಿ, ಸುಧಾಕರ ಪೂಂಜ, ಸಾಕೇತ್ ಭಂಡಾರಿ, ಯುವರಾಜ್ ಪೂಂಜ,ಸದಾಶಿವ ಶೆಟ್ಟಿ,ಪ್ರಕಾಶ್ ಬೆಳ್ಳೂರು, ವಿಶ್ವಂಭರ , ದಿನೇಶ್ ವರಕೋಡಿ, ತಿಮ್ಮಪ್ಪ ಕಮ್ಮಾಜೆ, ತಿರುಲೇಶ್ , ವಸಂತ, ಸೀತಾರಾಮ, ಬಾಲಕೃಷ್ಣ , ಗಂಗಯ್ಯ ಕಮ್ಮಾಜೆ ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.






