ಶ್ರೀರಾಮ ವಿದ್ಯಾ ಸಂಸ್ಥೆ ಫರಂಗಿಪೇಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಹಲವರಿಗೆ ಅಭಿನಂದನೆ
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಶ್ರೀರಾಮ ವಿದ್ಯಾ ಸಂಸ್ಥೆ ಫರಂಗಿಪೇಟೆ ಮತ್ತು ರೋಟರಿ ಕ್ಲಬ್ ಫರಂಗಿಪೇಟೆ ವತಿಯಿಂದ ಫರಂಗಿಪೇಟೆಯ ಶ್ರೀ ರಾಮ ಶಾಲೆಯ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಪುದು ಪಂಚಾಯತ್ ನ ಸಫಾಯಿ ಕರ್ಮಚಾರಿ ಮೊಹಮ್ಮದ್ ಕೈಸ್, 108 ಆಂಬುಲೆನ್ಸ್ ನ ಚಾಲಕರು ವೈದ್ಯಕೀಯ ಸಿಬ್ಬಂದಿ ಗಳಾದ ಬಸವನ ಗೌಡ ಹಾವೇರಿ , ಕೇಶವ ಕೆ ಬೆಳ್ತಂಗಡಿ , ಆಂಜನೇಯ ಸ್ವಾಮೀ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು .
ಈ ಸಮಾರಂಭದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ರೋಟರಿ ಕ್ಲಬ್ ಫರಂಗಿಪೇಟೆ ಅಧ್ಯಕ್ಷ ರಮೇಶ್ ತುಂಬೆ , ಶಾಲಾಭಿವೃದಿ ಸಮಿತಿ ಅಧ್ಯಕ್ಷ ಎ. ಕೆ. ಜಯರಾಮ್ ಶೇಕ , ರೋಟರಿ ಕಾರ್ಯದರ್ಶಿ ಅರ್ಜುನ್ ಪೂಂಜಾ , ಶಾಲಾ ಸಂಚಾಲಕ ಎ ಗೋವಿಂದ ಶೆಣೈ , ಶಾಲಾ ಆಡಳಿತ ಮಂಡಳಿ ಸದಸ್ಯ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ , ಶಾಲಾ ಆಡಳಿತ ಮಂಡಳಿ ಸದಸ್ಯ ದಾಮೋಧರ ಶೆಣೈ , ರೋಟರಿ ಕ್ಲಬ್ ಫರಂಗಿಪೇಟೆಯ ನಿಕಟ ಪೂರ್ವ ಕಾರ್ಯದರ್ಶಿ ರಮೇಶ್ ಶೆಟ್ಟಿ ಅಡ್ಯಾರ್ , ರೋಟರಿ ಸದಸ್ಯರುಗಳಾದ ಶ್ಯಾಮಲಾ ರಮೇಶ್ ಶೆಟ್ಟಿ , ದಿನೇಶ್ ಶೆಟ್ಟಿ ಕೊಟ್ಟಿಂಜ , ನಿಕಟ ಪೂರ್ವ ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು.