ಫರಂಗಿಪೇಟೆ: ಇಂಧನಗಳ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ನೀಡಿರುವ ಬಂದ್ ಕರೆಗೆ ಫರಂಗಿಪೇಟೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿವೆ. ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ.
ಈ ನಡುವೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ & ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಫ್ ಉಮ್ಮರ್ ಫಾರೂಕ್ ಫರಂಗಿಪೇಟೆ ರವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಫರಂಗಿಪೇಟೆ ಜಂಕ್ಷನ್ ಬಳಿ ಇಂಧನ ಬೆಲೆಯೇರಿಕೆಯನ್ನು ಖಂದಿಸಿ ಮಾತನಾಡಿದ ಅವರು ಇಂದು ಜನ ಸಾಮಾನ್ಯರು ಸ್ವಯಂ ಬಂದ್ ಮಾಡುದರ ಮೂಲಕ ಕೇಂದ್ರದ ಮೋದಿ ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುದು ಗ್ರಾ.ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮುಡಿಪು ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಂತ್ತಿಯಾಝ್ ತುಂಬೆ, ಪುದು ಗ್ರಾ,ಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಹಾಶೀರ್ ಪೇರಿಮಾರ್, ಗ್ರಾ ಪಂ ಸದಸ್ಯ ರಾದ ಇಕ್ಬಾಲ್ ಸುಜೀರ್, ರಿಯಾಝ್ ಕುಂಪನಮಜಲ್ ಪುದು ವಲಯ ಸಮಿತಿಯ ಸದಸ್ಯರಾದ ರಪೀಕ್ ಪೇರಿಮಾರ್,ಮಾಜೀದ್ ಫರಂಗಿಪೇಟೆ, ಸಲಾಂ ಮಲ್ಲಿ, ಅಕ್ಬರ್ ಮಲ್ಲಿ, ಇಬ್ರಾಹಿಂ ಮಲ್ಲಿ, ಇಸ್ಮಾಯಿಲ್ ಮಜಪೆ, ಬದ್ರುದ್ದೀನ್ ಕರ್ಮಾರ್, ಅಶ್ರಫ್ ಮಜಪೆ, ಬಶೀರ್ ತಂದೇಲ್, ಹನೀಫ್ ಕುಂಪನಮಜಲ್ , ನಿಸಾರ್ ಕುಂಪನಮಜಲ್, ಯುವ ಕಾಂಗ್ರೆಸ್ ಸದಸ್ಯರಾದ ಮಾಜೀದ್ ಪೇರಿಮಾರ್, ಲತೀಫ್ ಮಲಾರ್, ಇನ್ಸಾದ್ ಮಾರಿಪಳ್ಳ, ಸಿರಾಜ್ ಪೇರಿಮಾರ್ ಹಾಗೂ ಸಮಾಜಿಕ ಜಾಲತಾಣ ಉಸ್ತುವಾರಿ ಅತೀಕ್ ಅಬೂಬಕ್ಕರ್ ಉಪಸ್ಥಿತರಿದ್ದರು
Attachments area

