ಫರಂಗಿಪೇಟೆ: ಸಚಿವ ರಮಾನಾಥ ರೈ ಅವರ ನೇತೃತ್ವಸದಲ್ಲಿ ಸೌಹಾರ್ದತೆಯ ಸಾಮರಸ್ಯದ ನಡಿಗೆಗೆ ಮಂಗಳವಾರ 10 ಗಂಟೆಗೆ ಶಾಂತಿಯ ಸಂಕೇತದ ಪಾರಿವಾಳವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಯಾವುದೇ ಘೋಷನೆ ಕೂಗದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ಕಾಲ್ನಡಿಗೆಯಲ್ಲಿ ಸಾಮರಸ್ಯವನ್ನು ಕಾಯ್ದುಕೊಳ್ಳಲು ವಿನಂತಿಸಿದರು. ಚಲನಚಿತ್ರ ನಟ ಪ್ರಕಾಶ್ ರೈ , ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ್ ಕೋಟ್ಯಾನ್ , ಸಚಿವ ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಪುತ್ತೂರು ಶಾಸಕಿ ಶಕುಂತಲ ಶೆಟ್ಟಿ, ಜೆ ಆರ್ ಲೋಬೋ , ಐವನ್ ಡಿಸೋಜ , ಜೆಡಿಎಸ್ಮುಖಂಡ ಅಮರನಾಥ ಶೆಟ್ಟಿ ಬೆಲೂನ್ ಹಾಗೂ ಪಾರಿವಾಳ ಹಾರಿಸಿದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕು ಪಂ ಅಧ್ಯಕ್ಷ ಚಂದ್ರಹಾಶ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ,ಮಾಜಿ ಶಾಸಕ ರಾಮಲಿಂಗ ರೆಡ್ಡಿ,ಜಿಲ್ಲಾ ಪಂ. ಸದಸ್ಯ ಉಮ್ಮರ್ ಫಾರೂಕ್, ಪದ್ಮ ಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಹಲಾವಾರು ಮುಖಂಡರು ಪಾಲ್ಘೊಂಡಿದ್ದರು.
*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.






