ಸುದ್ದಿ ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಕನ್ನಡ ದೇವಿಯ ಸಾಹಿತ್ಯ ಜಾತ್ರೆಗೆ ಸಂಭ್ರಮದಿಂದ ಸಿದ್ಧಗೊಳ್ಳುತ್ತಿದೆ.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಆಶ್ರಯದಲ್ಲಿ ಜರುಗುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಲನದ ಪೂರ್ವ ತಯಾರಿ ಬಹುತೇಕ ಪೂರ್ಣಗೊಂಡಿದೆ. ಸಾಹಿತ್ಯ ಸಮ್ಮೇಲನದ ಚಪ್ಪರ ಮುಹೂರ್ತವನ್ನು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗು ಸಂಸದ ನಳಿನ್ಕುಮಾರ್ ಕಟೀಲ್ ಅವರು ನೆರವೇರಿಸಿದರು.
ಕ್ಷೇತ್ರದ ಅರ್ಚಕ ಪದ್ಮನಾಭ ಭಟ್ ಅವರು ಧಾಮರ್ಿಕ ಪ್ರಕ್ರಿಯೆಗಳನ್ನು ನೆರವೇರಿಸಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕುರ ಅವರು ಸಮ್ಮೇಲನದ ಪೂರ್ವಭಾವಿ ತಯಾರಿ ಹಾಗೂ ಪೂರ್ವಕ ಕಾರ್ಯಕ್ರಮಗಳ ವಿವರಣೆ ನೀಡಿದರು.
ಈ ಮಧ್ಯ ಸಂಸತ್ತಿನಲ್ಲಿ ಕನ್ನಡದಲ್ಲೆ ಪ್ರಮಾನ ವಚನ ಸ್ವೀಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಅಧ್ಯಕ್ಷ ಅಭಿನಂದಿಸಿದರು. ಐತಪ್ಪನಾಯ್ಕ್ , ನಿತ್ಯಾನಂದ ಕಾರಂತ, ಪ್ರೋ ಶಂಕರ ಶೆಟ್ಟಿ, ದಯಾನಂದ ಪೆರಾಜೆ, ಸಂಪತ್ಕುಮಾರ್, ಜಯರಾಮಕೃಷ್ಣ ಪೊಳಲಿ ,ಜನಾರ್ಧನ ಅಮ್ಮುಂಜೆ , ವೆಂಕಟೇಶ್ ನಾವಡ ಮತ್ತಿತರರು ಉಪಸ್ಥಿತರಿದ್ದರು.










