ಉಡುಪಿ:- ಮೊಗವೀರ ಯುವ ಸಂಘಟನೆ ಹಿರಿಯಡಕ,ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್,ಕೆ.ಎಂ.ಸಿ ಮಣಿಪಾಲ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಅ.26 ರಂದು ಹಿರೆಬೆಟ್ಟು ಆರ್ಯದುರ್ಗಾ ಸಭಾಭವನದಲ್ಲಿ ನಡೆದ ರಕ್ತದಾನ ಶಿಬಿರದ ಸಂದರ್ಭದಲ್ಲಿ ಸಚಿವರಾಗಿ ಮೊದಲ ಬಾರಿಗೆ ಹಿರೆಬೆಟ್ಟು ಗ್ರಾಮಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮೊಗವೀರ ಸಂಘಟನೆಯ ಬಾಲಕೃಷ್ಣ ಬಿಕೆ,ನಾರಾಯಣ ಪೂಜಾರಿ,ಸುಜಿತ್ ಹೆಗ್ಡೆ,ಪ್ರವೀಣ್ ಪೂಜಾರಿ,ದಿನೇಶ್ ಪಟ್ಯ,ಸೀತಾರಾಮ ಭಟ್,ಯಜ್ಞನಾಥ ಆಚಾರ್ಯ ಮುಂತಾದವರಿದ್ದರು.

