ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ನರಿಕೊಂಬು ಸತ್ಯಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವಜೀವನ ಸಮಿತಿ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕಾ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು. ಜನಜಾಗೃತಿ ವೇದಿಕೆ ಅಧ್ಯಕ್ಷ ಆನಂದ್ ಸಾಲ್ಯಾನ್, ಪ್ರಮುಖರಾದ ಬಟ್ಟ್ಯಪ್ಪ ಶೆಟ್ಟಿ, ಎ.ಸಿ ಭಂಡಾರಿ, ಎ. ರುಕ್ಮಯ್ಯ ಪೂಜಾರಿ, ಇದಿನಬ್ಬ, ನಿತ್ಯಾನಂದ ಸಫಲ್ಯ, ಸೋಮಶೇಖರ್, ರಾಜೇಶ್ ಕೊಟ್ಟಾರಿ, ಯೋಜನಾಧಿಕಾರಿ ಸುನೀತಾ ನಾಯಕ್ ಮತ್ತಿತರರು ಇದ್ದರು.

