ಮುಂಬಯಿ, 05: ಖಾಸಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾನಗರ ಮುಂಬಯಿ ಅಲ್ಲಿನ ಸಾಂತಕ್ರೂಜ್ನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕರ್ನಾಟಕ ರಾಜ್ಯದ ಆರೋಗ್ಯ ಸಚಿವ ಯು.ಟಿ ಖಾದರ್ ಅವರನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಾಭ್ಯುದಯ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು ಪುಷ್ಫಗುಪ್ಚವನ್ನಿತ್ತು ಆದರಪೂರ್ವಕ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಶ್ರೀನಿವಾಸ ಕರ್ಕೇರ, ಯಶವಂತ್ ಪೂಜಾರಿ ಪಲಿಮಾರು, ಭರತ್ ಶೆಟ್ಟಿ ಅಂಧೇರಿ, ಯುವ ಉದ್ಯಮಿ ಖಾಸೀಮ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ: ರೋನ್ಸ್ ಬಂಟ್ವಾಳ್

