ಡಿ.ವೈ.ಯಪ್ ಐ ನಿಂದ ಪ್ರತಿಭಟನೆ
ಕಿನ್ನಿಗೋಳಿ; ಸುರತ್ಕಲ್ ನಿಂದ ಕೈಕಂಬ ಸಂಚರಿಸುವ ರಸ್ತೆಯು ಬಿ.ಎ.ಎಸ್.ಯಪ್ ಬಳಿ ದೊಡ್ಡ ಸಂಪೂರ್ಣ ಕೆಟ್ಟು ಹೋಗಿದ್ದು ಇದನ್ನು ವಿರೋಧಿಸಿ ಇಂದು ಡಿ.ಐ.ಯಪ್.ಐ ವತಿಯಿಂದ ರಸ್ತೆ ತಡೆದು ಪ್ರತಿಬಟನೆ ನಡೆಸಲಾಯಿತು. ಸುಮಾರು ಅರ್ದ ಗಂಟೆಗಳ ಕಾಲ ರಸ್ತೆಯನ್ನು ತಡೆದು ಪ್ರತಿಬಟಿಸಲಾಯಿತು ನಂತರ ಮಾತನಾಡಿದ ಡಿ.ವೈ.ಯಪ್ ಐ ಮುಖಂಡ ಮುನಿರ್ ಕಾಟಿಪಳ್ಳ ಬಾಳ ಪಂಚಾಯತ್ ವ್ಯಾಪ್ತಿಯ ಈ ರಸ್ತೆಯಲ್ಲಿ ಡೊಡ್ದ ಡೊಡ್ದ ಗುಂಡಿಗಳಿದ್ದು ಅನೇಕ ವಾಹನಗಳು ಇಲ್ಲಿ ಜಖಂಗೊಂಡಿದೆ ಮಾತ್ರವಲ್ಲದೆ ಅನೇಕ ಅಪಘಾತಗಳು ಸಂಬವಿಸಿದೆ ಎಂದು ದೂರಿದರು.
ಎಂ.ಅರ್.ಪಿ.ಎಲ್ ಗೆ ಸಂಚರಿಸುವ ವಾಹನಗಳಿಂದ ಈ ರೀತಿಯ ಸಮಸ್ಸ್ಯೆಯಾಗಿದೆ, ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಅದಷ್ಟು ಬೇಗ ಸರಿಪಡಿಸಬೇಕೆಂದು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದೇವೆ ಆದರೂ ಈ ಬಗ್ಗೆ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡಿಲ್ಲ ಎಂದು ತಿಳಿಸಿದರು.ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುದು ಎಂದರು . ನಂತರ ಸ್ಥಳಕ್ಕೆ ಬೇಟಿ ನೀಡಿದ ನಗರ ಪಾಲಿಕೆ ಇಂಜಿನೀಯರ್ ಅಬ್ದುಲ್ ಖಾದರ್ ಮಂಗಳೂರು ನಗರ ಪಾಲಿಕೆ ಕಮಿಷನರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಇಂದಿನಿಂದಲೇ ಕಾಮಗಾರಿಯ ಪ್ರಾರಂಬಿಸಲಾಗುದು ಎಂದು ಭರವಸೆ ನೀಡಿದ ಬಳಿಕ ರಸ್ತೆ ತಡೆಯನ್ನು ಹಿಂದಕ್ಕೆ ತೆಗೆಯಲಾಯಿತು. ಈ ಸಂದರ್ಭ ಡಿ.ವೈ.ಯಪ್ ಐ ನ ಶ್ರೀನಾಥ ಕಾಟಿಪಳ್ಳ, ಬಿ.ಎಂ.ಇಂತಿಯಾಜ್, ಸಂತೋಷ ಬಜಾಲ್ ಮುಂತಾದವರು ಉಪಸ್ತಿತರಿದ್ದರು