ಸುದ್ದಿ9ಬಂಟ್ವಾಳ: ಭಾರತೀಯ ಸಂಸ್ಕಾರ ಪರಿಷತ್ (ರಿ) ಇದರ ವತಿಯಿಂದ ಗೀತಾಂಜಲಿ ಸಭಾ ಭವನದಲ್ಲಿ ನಡೆದ ಯುಗಾದಿ ಉತ್ಸವ, ಯುಗಾದಿ ಪುರಸ್ಕಾರ 2014 ವಿತರಣೆ ಕಾರ್ಯಕ್ರಮವನ್ನು ಡಾ| ಕೆ. ಪ್ರಭಾಕರ ಭಟ್ ಅವರು ಉದ್ಘಾಟಿಸಿದರು.

ಈ ಸಂದರ್ಭ ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನ ನೀಡಿದರು. ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರರಾದ ತಾರನಾಥ ಆಳ್ವ ಉಳಿಪಾಡಿಗುತ್ತು, ಉದ್ಯಮಿ ಹಾಗೂ ಪಿ.ಡಬ್ಲ್ಯು.ಡಿ ಗುತ್ತಿಗೆದಾರ ಲಯನ್ ಎಂ. ಗೋಪಾಲಕೃಷ್ಣ ಮೇಲಾಂಟ, ಜಿ.ಧರ್ಮ ಪ್ರಸರಣಾ ಪ್ರಮುಖ್ ಜಿತೇಂದ್ರ ಎಸ್. ಕೊಟ್ಟಾರಿ, ಲೇಖಕ & ಸಂಗೀತಗಾರ ರಮಾನಾಥ ಕೋಟೆಕಾರು, ಸ್ಥಾಪಕಾಧ್ಯಕ್ಷ ಕೆ.ರಾಜಾರಾಮ ನಾಯಕ್ ಉಪಸ್ಥಿತರಿದ್ದರು.

