ಬಜ್ಪೆ: ಸುಕಂದಕಟ್ಟೆ ಶ್ರೀ ನಿರಂಜನ ಪ್ರಥಮ ದರ್ಜೆ ಕಾಲೇಜು, ವಿಧ್ಯಾರ್ಥಿ ಸಂಘದ ಆಶ್ರಯದಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕøತಿಕ ಸ್ಪರ್ಧೆ ಸಮೃದ್ಧಿ -2015 ಕಾಲೇಜ್ ಆವರಣದಲ್ಲಿ ಶುಕ್ರವಾರ ನಡೆಯಿತು. ನಟ ಬೋಜರಾಜ್ ವಾಮಂಜೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ರಾಜರಾಮ್ (ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಿಜಯಾಬ್ಯಾಂಕ್ ಮಂಗಳೂರು) ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ವಿಜಯಾಬ್ಯಾಂಕ್ ಬಜಪೆ ಮ್ಯಾನೇಜರ್ ವಿಜಯ್ ಕುಮಾರ್, ಕೆ.ಭುವನಬಿರಾಮ ಉಡುಪ,(ಯುಗಪುರುಷ ಕಿನ್ನಿಗೋಳಿ), ಬಾಬುರಾಯ ಆಚಾರ್ಯ, ಅನಿಲ್ ಕುಮಾರ್ ಸುಂಕದಕಟ್ಟೆ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿಧ್ಯಾಲಯ ವ್ಯಾಪ್ತಿಯ 12 ಕಾಲೇಜು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿ12 ತಂಡಗಳಿಗೆರಾಜ್ಯದ ಐತಿಹಾಸಿಕ ಸ್ಥಳಗಳ ಹೆಸರನ್ನು ಇಡಲಾಯಿತ್ತು.ಎಲ್ಲಾ ತಂಡಗಳಿಂದ ವೈವಿದ್ಯಮಯ ಸ್ಪರ್ಧೆ ನಡೆಯಿತ್ತು
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲಕರಾದ ಲತಾ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಂiÀರ್iಕ್ರಮದ ತೀರ್ಪುಗಾರರಾಗಿ ಪರಮಾನಂದ ಸಾಲ್ಯಾನ್, ಮಲ್ಲಿಕ ಶೆಟ್ಟಿ, ಕುಮಾರ್ ಮಾಲೇಮಾರ್ ಕಾರ್ಯನಿರ್ವಹಿಸಿದರು. ಹರ್ಷಿತಾ ಧನ್ಯವಾದವಿತ್ತರು. ಬಹುಮಾನದ ವರದಿಯನ್ನು ಉಪಪ್ರಾಂಶುಪಾಲರಾದ ಗಣೇಶ್ ಬಿಎಂ ಮಾಡಿದರು.
ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕರಂಬಾರು ಬಜಪೆ ಇದರ ಅಧ್ಯಕ್ಷರಾದ ವಸಂತ್ ಕುಮಾರ್ ಬಂಗೇರಾ, ಸೀರಿಯಲ್ ಗ್ರೂಪ್ ದುಬೈ ಇದರ ಅಧ್ಯಕ್ಷರಾದ ಜಯಂತ್ ಸುವರ್ಣ, ಲಯನ್ ಎಂ ಎಸ್ ರಾವ್ ಎಂ ಜಿಎಫ್, ತುಳು ಚಿತ್ರ ರಂಗ್ ಇದರನಿರ್ದೇಶಕ ಸುಹಾನ್ ಪ್ರಸಾದ್ ಬಿಜೈ, ಗಂಗಯ್ಯ ನಾಯಕ್, ಕಾಲೇಜ್ ಪ್ರಾಂಶುಪಾಲೆ ಲತಾ ಕೆ, ಹಳೆ ವಿದ್ಯಾರ್ಥಿ ಹರಿಣಾಕ್ಷಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿದ್ಯಾಧರ ನಾಯಕ್, ಸುಕುಮಾರ್ ಸಾಲ್ಯಾನ್ ಮತ್ತಿತತರು ಉಪಸ್ಥಿತರಿದ್ದರು. ಮದೂರಾಜ್, ಜಿತೇಶ್, ಕುಸುಮ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರು:
ಸಮಗ್ರ ವಿಭಾಗದಲ್ಲಿ
ಪ್ರಥಮ: ವಿವಿ ಕಾಲೇಜ್ ಮಂಗಳೂರು
ದ್ವಿತೀಯ: ಸರಕಾರಿ ಪ್ರಥಮ ದರ್ಜೆ ಕಾಲೇಜ್ ಬೆಳ್ತಂಗಡಿ
ತೃತೀಯ: ಗೋವಿಂದ ದಾಸ್ ಕಾಲೇಜ್ ಸುರತ್ಕಲ್
ಅತ್ಯುತ್ತಮಜಾನಪದ ನೃತ್ಯ ಹಾಗೂ ಅತ್ಯತ್ತಮ ಪ್ರಹಸನ: ಗೋವಿಂದ ದಾಸ್ ಕಾಲೇಜ್ ಸುರತ್ಕಲ್
ಅತ್ಯತ್ತಮ ನಿರೂಪಣೆ ವಿವಿ ಕಾಲೇಜ್ ಮಂಗಳೂರು
ತೀರ್ಪುಗಾರರ ಮೆಚ್ಚುಗೆ ಪಡೆದ ಉತ್ತಮ ನಿರೂಪಕರು: ಗೋವಿಂದ ದಾಸ್ ಕಾಲೇಜ್ ಸುರತ್ಕಲ್, ಸರಕಾರಿ ಪ್ರಥಮ ದರ್ಜೆ ಕಾಲೇಜ್ ಬೆಳ್ತಂಗಡಿ
ಬಜೆಪಿ_0707ಫೆಬ್_2ಸಮೃದ್ಧಿ2015










