ಪೊಳಲಿ:ರಾಮಕೃಷ್ಣ ತಪೋವನ ಪೊಳಲಿಯಲ್ಲಿ ರೋಟರಿಕ್ಲಬ್ ಮಂಗಳೂರು ಉತ್ತರ,ಯೆನೆಪೋಯಾ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ವಿವೇಕಾನಂದ ರೋಟರಿ ಸಮುದಾಯದಳ ಮತ್ತು ರಾಮಕೃಷ್ಣ ತಪೋವನ ಪೊಳಲಿ ಇವರ ಆಶ್ರಯದಲ್ಲಿ ಬಿ.ಪಿ.ಶುಗರ್ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಕ್ಯಾನ್ಸರ್ ಜಾಗೃತಿಅಭಿಯಾನ ಜೂ.೮ರಂದು ಭಾನುವಾರ ನಡೆಯಿತು.


ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಹಿಳೆಯರು ಇದರ ಪ್ರಯೋಜನ ಪಡೆಯಲು ತಿಳಿಸಿದರು. ಸಂಪನ್ಮೂಲವ್ಯಕ್ತಿಗಳಾಗಿ ಯೆನೆಪೋಯಾ ಮೆಡಿಕಲ್ ಕಾಲೇಜು ದೇರಳಕಟ್ಟೆ ಪ್ರೊಫೆಸರ್ ಡಾ,ಪ್ರಭಾ ಅಧಿಕಾರಿ ಮಾಹಿತಿ ನೀಡಿದರು.

ಮಂಗಳೂರುಕೆ.ಎಮ್.ಸಿ.ಆಸ್ಪತ್ರೆ ,ಮಾಜಿ ಡೀನ್ ಡಾ,ರಘುವೀರ್,ಉತ್ತರರೋಟರಿ ಕ್ಲಬ್ ಇದರ ಅಧ್ಯಕ್ಷ ಮೋಹನ್ ನಾಯರ್ , ಕಾರ್ಯದರ್ಶಿ ಸುದರ್ಶನ್ ನಾಯಕ್ , ವಿಶ್ವನಾಥ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಡಾ.ಶಿವಪ್ರಶಾದ್, ಅಜಿತ್ ರಾವ್ , ಕಾಂಚನ ದೇವಿ ,ಶಾಂಭವಿ ಪ್ರಭು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *