ಗೋಳಿದಡಿಗುತ್ತಿನ `ಸುಕ್ಷೇತ್ರ ಗುರುಪುರ’ದಲ್ಲಿ ಮೇ. ೧೫-೧೭ರತನಕ ವಿಶಿಷ್ಠ ಧಾರ್ಮಿಕ ಕಾರ್ಯಕ್ರಮ
ಶ್ರೀ ಗುರುಮಹಾಕಾಲೇಶ್ವರ ಏಕಶಿಲಾಮೂರ್ತಿ `ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ’ದ ಆಮಂತ್ರಣ ಪತ್ರಿಕೆ
ಬಿಡುಗಡೆ
ಕೈಕಂಬ: ಗೋಳಿದಡಿಗುತ್ತಿನ ಶ್ರೀ ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಗುರುಪುರ ಇದರ ಸುಕ್ಷೇತ್ರ ಗುರುಪುರ' ಇಲ್ಲಿ ಮೇ. ೧೫ರಿಂದ ೧೭ರವರೆಗೆ ನಡೆಯಲಿರುವ ಶ್ರೀ ಗುರುಮಹಾಕಾಲೇಶ್ವರನ ಭವ್ಯ ಏಕಶಿಲಾಮೂರ್ತಿಯ
ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ’ದ ಆಮಂತ್ರಣ ಪತ್ರಿಕೆ ಮತ್ತು ಪಂಚಕಲ್ಯಾಣಯುಕ್ತ ಕಲಶ ರಶೀದಿ ಬಿಡುಗಡೆ ಸಮಾರಂಭ ಗೋಳಿದಡಿಗುತ್ತಿನ ಸಭಾಂಗಣದಲ್ಲಿ ಎ. ೨೫ರಂದು ನಡೆಯಿತು.
ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಹಾಗೂ ಬ್ರಹ್ಮಕಲಶ ಸಂಭ್ರಮ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಮಂತ್ರಣ ಪತ್ರಿಕೆ ಮತ್ತು ಕಲಶ ರಶೀದಿ ಬಿಡುಗಡೆಗೊಳಿಸಿದರು.

ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಸ್ತಾವಿಸುತ್ತ, ೨೦೧೬ರಲ್ಲಿ ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ವೇದ ಕೃಷಿಕ ಬ್ರಹ್ಮಋಷಿ ಕೆ. ಎಸ್. ನಿತ್ಯಾನಂದ ಗುರುಗಳ ಸಂಕಲ್ಪದAತೆ ಗುರುಪುರ ಗೋಳಿದಡಿಗುತ್ತಿನ ಮನೆಗೆ ಸನಿಹದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿ ತಟದಲ್ಲಿ ೪೫ ಅಡಿ ಎತ್ತರದ ಶ್ರೀ ಗುರು ಮಹಾಕಾಲೇಶ್ವರನ ಏಕಶಿಲಾ ಮೂರ್ತಿ ನಿರ್ಮಾಣಗೊಂಡಿದೆ. ೫೦೦೫ ರೂ ನೀಡಿ ಕಲಶ ಸ್ವೀಕರಿಸಿದ ಸಾವಿರ ಭಕ್ತರಿಗೆ ಬ್ರಹ್ಮಕಲಶದಂದು(ಮೇ. ೧೬ರಂದು) ಕಲಶಾಭಿಷೇಕ ಮಾಡಲು ಅವಕಾಶವಿದೆ. ಸ್ತಿçÃ-ಪುರುಷ ಲಿಂಗಬೇಧ, ಜಾತಿ ಬೇಧ ಮರೆತು ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶವಿದೆ. ಭಾವೈಕ್ಯತೆ ಮತ್ತು ರಾಷ್ಟçಧರ್ಮದ ಪರಿಕಲ್ಪನೆ ಅಡಕವಾಗಿರುವ ಈ ಸತ್ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲ ಸದ್ಭಕ್ತರಲ್ಲಿ `ಇದು ನಮ್ಮ ದೇವರು’ ಎಂಬ ಭಾವನೆ ಮೂಡಿ ಬರಬೇಕು ಎಂದರು.
ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರುಗುತ್ತು ಮಾತನಾಡಿ, ಸುತ್ತಲ ಸುಮಾರು ೨೦ ಗ್ರಾಮಗಳ ವಿಭಿನ್ನ ಜಾತಿಯವರು ಒಳಗೊಂಡಿರುವ `ಗುರುಪುರ ಪ್ರಖಂಡ ಸಮಿತಿ’ ರಚಿಸಲಾಗಿದೆ. ಎಲ್ಲರಿಗೂ ಆಮಂತ್ರಣ ಪತ್ರಿಕೆ ಸಿಗಬೇಕು. ಕಾರ್ಯಕ್ರಮ ಅಚ್ಚುಕಟ್ಟು ಮತ್ತು ಸ್ವಚ್ಛ ನಿರ್ಮಲವಾಗಿ ನಡೆಯಬೇಕು. ಎಲ್ಲೂ ಕೊರತೆಯಾಗಬಾರದು ಎಂದರು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶದಲ್ಲೇ ಪ್ರಥಮ ಎನ್ನಲಾದ ನಿಂತ ಭಂಗಿಯ ಅತಿ ಎತ್ತರದ ಶ್ರೀ ಗುರು ಮಹಾಕಾಲೇಶ್ವರ ಮೂರ್ತಿಯ ಪ್ರತಿಷ್ಠಾಪನೆಯಿಂದ ಸನಾತನ ಹಿಂದೂಗಳು ಗುರುಪುರದತ್ತ ನೋಡುವಂತಾಗಲಿದೆ. ಸುಕ್ಷೇತ್ರ ಗುರುಪುರದಿಂದ ಮಾನವತಾವಾದ ಎಲ್ಲೆಡೆ ಪಸರಿಸಲಿ ಎಂದರು.
ಬ್ರಹ್ಮಕಲಶ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ವಕೀಲರಾದ ಶಂಭು ಶರ್ಮ, ಒ. ಟಿ. ಭಟ್ ಮಾತನಾಡಿದರು. ಬ್ರಹ್ಮಕಲಶ ಸಂಭ್ರಮ ಸಮಿತಿ ಕಾರ್ಯದರ್ಶಿ ಸುನಿಲಾ ಪಿ. ಶೆಟ್ಟಿ ಸ್ವಾಗತಿಸಿದರು. ಡಾ. ಸಮನಾ ಶೆಟ್ಟಿ ಅವರು ಪ್ರಾರ್ಥನೆಗೈದರು.
ಸಮಾರಂಭದಲ್ಲಿ ಗುರುಪುರ ಪ್ರಖಂಡ ಸಮಿತಿ ಅಧ್ಯಕ್ಷ ಚಂದ್ರಹಾಸ ಡಿ. ಅಮೀನ್ ಕಾವೂರು, ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು ಮಜಲೊಟ್ಟು ಬೀಡು ಶಿರ್ವ, ಅನ್ನಸಂತರ್ಪಣೆ ಸಮಿತಿ ಅಧ್ಯಕ್ಷ ಹೋಟೆಲ್ ಉದ್ಯಮಿ ವೈ. ರವಿ ಭಟ್ ಎರ್ಮಾಳ್, ಗೋಳಿದಡಿಗುತ್ತಿನ ಗಡಿಕಾರರ ಧರ್ಮಪತ್ನಿ ಉಷಾ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಹಲವು ಗುತ್ತು-ಬೀಡು-ಬಾರಿಕೆಯ ಪ್ರಮುಖರು, ಗೋಳಿದಡಿಗುತ್ತಿನ ಚಾವಡಿ ಮಿತ್ರರು, ಊರ ಸದ್ಭಕ್ತರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ ಸಮಿತಿ ಸಂಚಾಲಕ ನವೀನ್ ಶೆಟ್ಟಿ ಎಡ್ಮೆಮಾರುಗುತ್ತು ನಿರೂಪಿಸಿ ವಂದಿಸಿದರು.