ಅಂದಾಜು೧.೭೫ ಕೋ. ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬೃಹ್ಮಶ್ರಿ ನಾರಾಯಣ ಗುರು ಭವನ
ಮೇ ೪ರಂದು ಗುರುಪುರ ಬಿಲ್ಲವ `ಸಮುದಾಯ ಭವನ’ ಲೋಕಾರ್ಪಣೆ
ಕೈಕಂಬ: ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಇದರ ಭವ್ಯ ಕನಸಾದ `ಸಮುದಾಯ ಭವನ’ ನಿರ್ಮಾಣಗೊಂಡಿದೆ ಎಂಬುದು ಬಿಲ್ಲವ ಸಮಾಜವು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಂಗತಿ. ೨೦೨೫ರ ಮೇ. ೪ರಂದು ಸಮಾಜದ ಸ್ಮರಣೆಯಲ್ಲಿ ಉಳಿಯುವ ಸಮಾರಂಭದೊಂದಿಗೆ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಪರಮೋಚ್ಛ ತತ್ವಾದರ್ಶದಂತೆ ೬೫ ಸಂವತ್ಸರಗಳ ಹಿಂದೆ ಗುರುಪುರದಲ್ಲಿ ಸ್ಥಾಪನೆಯಾಗಿರುವ ಬಿಲ್ಲವ ಸಂಘವು ಹಲವು ಸಮಾಜೋದ್ಧಾರ ಕಾರ್ಯ ನಡೆಸಿದೆ. ಸಮುದಾಯಕ್ಕೆ ನೆರವಾಗಬೇಕೆನ್ನುವ ಉದ್ದೇಶದಿಂದ ಸಂಘವು ಕೈಹಾಕಿರುವ ಸಮುದಾಯ ಭವನ ಯೋಜನೆ ಇದೀಗ ಕೈಗೂಡಿದೆ ಎಂಬುದು ಸಂತಸದ ವಿಷಯ.
ಸಂಘ ನಡೆದು ಬಂದ ದಾರಿ :
ಬಿಲ್ಲವ ಮುಖಂಡರಾದ ಡಾ. ಉಮಾನಾಥ ಸುವರ್ಣ ಬಿಕರ್ಣಕಟ್ಟೆ ಮತ್ತು ದಿ. ಸುಬ್ಬಪ್ಪ ಕೋಟ್ಯಾನ್ ಅವರ ಆಶಯದಂತೆ ಗುರುಪುರ ಭಂಡಾರಮನೆ ದಿ. ಸಂಕಪ್ಪ ಪೂಜಾರಿ, ದಿ. ಬೆಜ್ಜಬೆಟ್ಟು ದಾಸು ಪೂಜಾರಿ, ದಿ. ಗುಡ್ಡುಹಿತ್ಲು ಬಾಬು ಕುಂದರ್, ಭಂಡಾರಮನೆ ತಿಮ್ಮ ಪೂಜಾರಿ ಮತ್ತಿತರ ಸಮಾನ ಮನಸ್ಕರು ೧೯೬೦ರಲ್ಲಿ ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬಿಲ್ಲವ ಸಂಘ ಸ್ಥಾಪಿಸುವ ಸಕಾರಾತ್ಮಕ ನಿರ್ಧಾರ ಕೈಗೊಂಡರು. ನಂತರ ೧೯೬೪ರಿಂದ ೧೯೭೪ರವರೆಗೆ ಸ್ತಬ್ಧಗೊಂಡಿದ್ದ ಸಂಘವು, ದಿ. ಎಸ್. ನಾರಾಯಣ ಪೂಜಾರಿ ಕುಲವೂರು ಮತ್ತಿತರರ ಮುಂದಾಳತ್ವದಲ್ಲಿ ಮತ್ತೆ ಹೊಸ ಯೋಜನೆಗಳೊಂದಿಗೆ ಮುನ್ನೆಲೆಗೆ ಬಂದಿತ್ತು. ೧೯೭೯ರಲ್ಲಿ ಗುರುಪುರ ಅಹಲ್ಯಾವನದಲ್ಲಿ ೪೭ ಸೆಂಟ್ಸ್ ಜಾಗ ಖರೀದಿಸಿದ ಸಂಘವು, ೧೯೮೧ರಲ್ಲಿ ಗುರು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ, ೧೯೮೩ರಲ್ಲಿ ಮಂದಿರ ಸ್ಥಾಪಿಸಿತು. ೨೦೧೦ರಲ್ಲಿ ಸಂಘವು ಸುವರ್ಣ ಮಹೋತ್ಸವ ಆಚರಿಸಿತ್ತು.

ನಂತರ ಸಂಘದ ಕಾರ್ಯಚಟುವಟಿಕೆ ನೂತನ ಗುರು ಮಂದಿರಕ್ಕೆ ಸ್ಥಳಾಂತರಗೊAಡಿದ್ದು, ಸಮಾಜದ ಬಡವರ ವಿವಾಹ, ಶಿಕ್ಷಣ, ಮನೆ ಹಾಗೂ ಇನ್ನಿತರ ಅಗತ್ಯ-ಕಷ್ಟಗಳಿಗೆ ನೆರವಾಗುತ್ತಿದೆ. ಸಂಘದಿAದ ಸಮಾಜಕ್ಕೆ ಹೆಚ್ಚಿನ ನೆರವಾಗಬೇಕೆಂಬ ನಿಟ್ಟಿನಲ್ಲಿ ಅಂದಾಜು ೧.೭೫ ಕೋ. ರೂ. ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಕೈಹಾಕಲಾಯಿತು. ಇದಕ್ಕೆ ಸರ್ಕಾರದಿಂದ ೬೫ ಲ. ರೂ. ಸಿಕ್ಕಿದ್ದರೆ, ದಾನಿಗಳು ಹಾಗೂ ಸಮಾಜದ ಸಹಕಾರ ಮರೆಯುವಂತಿಲ್ಲ. ಭವನ ನಿರ್ಮಾಣ ಕಾರ್ಯದಲ್ಲಿ ಮಾಜಿ ಅಧ್ಯಕ್ಷ ದಿ. ಸುಧಾಕರ ಅಮೀನ್ ಕಾಜಿಲ ಅವರ ಶ್ರಮ ಮತ್ತು ಕಾಳಜಿ ಸದಾ ನೆನಪಿನಲ್ಲಿ ಉಳಿಯುವುದು. ಸ್ಥಾಪಕಾಧ್ಯಕ್ಷ ದಿ. ಸಂಕಪ್ಪ ಪೂಜಾರಿ ಭಂಡಾರಮನೆ, ದಿ. ಯಾದವ ಸಾಲ್ಯಾನ್(ಹಂಗಾಮಿ), ಎಸ್. ನಾರಾಯಣ ಪೂಜಾರಿ ಕುಲವೂರು, ಮಹಾಬಲ ಪೂಜಾರಿ ದೇವಂದಬೆಟ್ಟು, ಶೀನ ಕೋಟ್ಯಾನ್ ಬೆಳ್ಳಿಬೆಟ್ಟು, ಗಂಗಾಧರ ಅಂಚನ್ ಬೆಜ್ಜಬೆಟ್ಟು, ಬಾಲಕೃಷ್ಣ ಕೋಟ್ಯಾನ್, ಸುಧಾಕರ ಅಮೀನ್ ಕಾಜಿಲ ಮತ್ತು ಮಹಾಬಲ ಅಮೀನ್ ಗುರುಪುರ ಇವರ ಮುಂದಾಳತ್ವದಲ್ಲಿ ಸಂಘವು ಮಹತ್ವದ ಅಭಿವೃದ್ಧಿ ಕಂಡಿದೆ. ಹಿರಿಯರಾದ ದೇವದಾಸ್ ಅಂಚನ್ ಮತ್ತು ಬಳ್ಳಿ ಚಂದ್ರಶೇಖರ ಅವರ ಕಾರ್ಯದಕ್ಷತೆಯಿಂದ ಸಂಘದ ಲೆಕ್ಕಪತ್ರ ಪಾರದರ್ಶಕವಾಗಿದೆ. ಸಂಘದ ಕಾರ್ಯ ಚಟುವಟಿಕೆ ವಿಸ್ತರಣೆ ದೆಸೆಯಲ್ಲಿ ವಿನೋದಾ ಡಿ. ಅಂಚನ್ ಅಧ್ಯಕ್ಷತೆಯಲ್ಲಿ ಸಂಘದ ಅಂಗಸAಸ್ಥೆಯಾಗಿ ಹುಟ್ಟಿಕೊಂಡಿರುವ ಸ್ಫೂರ್ತಿ ಬಿಲ್ಲವ ಮಹಿಳಾ ಘಟಕವು ಗುರುವರ್ಯರ ತತ್ವಾದರ್ಶ ಸಕಾರಗೊಳಿಸುತ್ತಿದೆ. ಸಂಘದ ಪದಾಧಿಕಾರಿಗಳು ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಎನ್. ಎಚ್. ಪೊನ್ನೆಲ ಇವರ ಮುಂದಾಳತ್ವದಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದೆ.

“ಗುರುಪುರದಲ್ಲೂ ಬಿಲ್ಲವ ಸಮುದಾಯ ಭವನ ನಿರ್ಮಾಣವಾಗಬೇಕೆಂಬ ಕನಸು ಎಲ್ಲರ ಶ್ರಮದಿಂದ ನನಸಾಗುತ್ತಿದೆ. ಇದು ಬಿಲ್ಲರಿಗೆ ಹೆಮ್ಮೆಯ ವಿಷಯ. ಸಂಘವು ಸಮಾಜ ಬಾಂಧವರಿಗೆ ನೆರವಾಗಬೇಕು. ಭವನದಿಂದ ಆಸುಪಾಸಿನ ಬಡವರ ಕಾರ್ಯಕ್ರಮಗಳಿಗೆ ಪ್ರಯೋಜನವಾಗಬೇಕು. ಸಮಾಜದ ಮಕ್ಕಳ ಶೈಕ್ಷಣಿಕ ಕಷ್ಟಗಳಿಗೆ ಸಂಘ ಸ್ಪಂದಿಸಬೇಕು” ಎಂದು ಸಂಘದ ಮಾಜಿ ಉಪಾಧ್ಯಕ್ಷ ದೇವದಾಸ ಅಂಚನ್ ಬೆಜ್ಜಿಬೆಟ್ಟು ಆಶಿಸಿದರು.
“ಸಮುದಾಯ ಭವನಕ್ಕೆ ಸಹಕರಿಸಿದ ಸರ್ಕಾರ, ದಾನಿಗಳು ಹಾಗೂ ಸಮಾಜ ಬಾಂಧವರಿಗೆ ಮೊದಲಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಭವನದಿಂದ ಬರುವ ಆದಾಯ ಸಮಾಜದ ಬಡಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ಮದುವೆ ಇತ್ಯಾದಿ ಅಗತ್ಯಗಳಿಗೆ ವಿನಿಯೋಗಿಸಲು ಇಚ್ಛಿಸಿದ್ದೇವೆ. ಭವನಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸುವ ಪ್ರಯತ್ನ ಮುಂದುವರಿದಿದೆ. ಬಿಲ್ಲವ ಬಂಧುಗಳು ಮುಂದೆಯೂ ನಮ್ಮೊಂದಿಗಿದ್ದರೆ, ಸಂಘದಿAದ ಇನ್ನೂ ಹೆಚ್ಚಿನ ಸೇವೆ ನಿರೀಕ್ಷಿಸಬಹುದು” ಎಂದು ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಗುರುಪುರ ತಿಳಿಸಿದರು.