Published On: Mon, Dec 2nd, 2024

ಭಕ್ತರೇ ಎಚ್ಚರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಡಾನೆ ಬಂದಿದೆ, ದೇಗುಲದ ಆನೆ ಎಂದು ನಮಸ್ಕಾರ ಮಾಡಬೇಡಿ

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಾಡಾನೆಯೊಂದು ಬಂದಿದೆ. ದೇವಸ್ಥಾನದ ಸುತ್ತಾಮುತ್ತಾ ಈ ಕಾಡಾನೆ ಓಡಾಡುತ್ತಿದೆ. ಇನ್ನು ದೇವಾಲಯಕ್ಕೆ ಬಂದ ಭಕ್ತರು, ಇದು ದೇವಸ್ಥಾನದ ಆನೆ ಎಂದು ನಮಸ್ಕಾರ ಮಾಡಲು ಹೋಗಿದ್ದಾರೆ. ಈಗಾಗಲೇ ಕಾಡಾನೆಯನ್ನು ಹಿಡಿಯಲು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದಿದ್ದಾರೆ. ಈ ಆನೆ ಮಠದ ಬಳಿ ಕೂಡ ಹೋಗಿದೆ. ಇನ್ನು ಕಾಡಾನೆ ಓಡಿಸಲು ಜನರು ಮುಂದಾಗಿದ್ದಾರೆ.

ಇನ್ನು ಈಗ ಕುಕ್ಕೆಯಲ್ಲಿ ಉತ್ಸವ ನಡೆಯುತ್ತಿರುವ ಕಾರಣ ಬೆಳಕು, ಬ್ಯಾಂಡ್ ಸದ್ದಿಗೆ ಈ ಕಾಡಾನೆ ಬೆದರಿ ದಿಕ್ಕು ಪಾಲಾಗಿ ಓಡುತ್ತಿದೆ. ಇನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ದೇವಾಲಯದ ಆಡಳಿತ ಮಂಡಲಿ ಹಾಗೂ ಅರಣ್ಯಾಧಿಕಾರಿಗಳು ದೇಗುಲದ ಆನೆ ಎಂದು ನಮಸ್ಕಾರ ಮಾಡಲು ಭಕ್ತರು ಮುಂದಾಗಬಾರದು ಎಂದು ಆದೇಶವನ್ನು ನೀಡಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter