Published On: Mon, Jun 10th, 2024

ಉಚಿತ ದಂತ ಹಾಗೂ ವೈದ್ಯಕೀಯ ಶಿಬಿರ,ಸಹಾಯಧನ ವಿತರಣೆ

   ಬಂಟ್ವಾಳ: ತಾಲೂಕಿನ ಶ್ರೀ ಮಂತ್ರ ದೇವತಾ ಜನ ಸೇವಾ ಟ್ರಸ್ಟ್ ಕಟ್ಟೆಮಾರ್ ಹಾಗೂ  ಅಖಿಲ ಕರ್ನಾಟಕ ರಾಜ್ಯ ಕೇಸರಿ ಟ್ರಸ್ಟ್( ರಿ)ಬೆಳ್ತಂಗಡಿ  ಇದರ ಜಂಟಿ ಆಶ್ರಯದಲ್ಲಿ ದ.ಕ. ಜಿಲ್ಲಾ ವೈದ್ಯಕೀಯ ಪ್ರಕೋಸ್ಠದ  ಸಯೋಗದೊಂದಿಗೆ, ಕೆ. ವಿ. ಜಿ ದಂತ ಮಹಾ ವಿದ್ಯಾಲಯ ಸುಳ್ಯ, ಯನೇಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಇವುಗಳ ನೇತೃತ್ವದಲ್ಲಿ  ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ  ಕಟ್ಟೆಮಾರ್ ನ ಧರ್ಮದರ್ಶಿ ಶ್ರೀ ಮನೋಜ್ ಕಟ್ಟೆಮಾರ್   ರವರ ಹುಟ್ಟು ಹಬ್ಬದ ಪ್ರಯುಕ್ತ”ಬೃಹತ್ ಉಚಿತ ದಂತ ಹಾಗೂ ವೈದ್ಯಕೀಯ ಶಿಬಿರ”ಕಟ್ಟೆಮಾರು   ಶ್ರೀ ಮಂತ್ರ ದೇವತಾ ಸಾನಿಧ್ಯದಲ್ಲಿ ಭಾನುವಾರ ನಡೆಯಿತು. 

ಕಾರ್ಯಕ್ರಮವನ್ನು ಪುಂಜೋಳಿ ಮಾರುಗುತ್ತು ಮೋಹನ್ ರಾಜ್ ಚೌಟ ಉದ್ಘಾಟಿಸಿ ಇದು ಪುಣ್ಯದ ಕಾರ್ಯ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ.ಎಂ.ದಯಾಕರ್  ಮಾತಾಡಿ ಇನ್ನೊಬ್ಬರ ಮನೆ ಬೆಳಗಬೇಕಂಬ ದೃಷ್ಟಿಯಿಂದ ಶ್ರೀ ಮಂತ್ರ ದೇವತಾ ಜನಸೇವಾ ಟ್ರಸ್ಟ್   ಹಾಗೂ ಅಖಿಲ ಕರ್ನಾಟಕ ರಾಜಕೇಶ್ವರಿ ಟ್ರಸ್ಟ್ ನ ಈ ಕಾರ್ಯ ಅಭಿನಂದನೀಯವಾಗಿದೆ. ಈಗಿನ ಸಮುದಾಯ  ವಿಷಯುಕ್ತ ಆಹಾರ ಸೇವಿಸುವುದರಿಂದಲೇ ದಿನದಿಂದ ದಿನಕ್ಕೆ ರೋಗಿಗಳ ಪ್ರಮಾಣ ಜಾಸ್ತಿಯಾಗುತ್ತಿದ್ದು, ನಾವು ಸೇವಿಸುವ ಆಹಾರದ ಕಡೆ ಗಮನ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.          


ಈ ಸಂದರ್ಭದಲ್ಲಿ ಮಂಗಳೂರು ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್ ಹಾಗೂ  ಡಾ. ಎಂ.ಎಂ. ದಯಾಕರ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.ಬಡ ವಿದ್ಯಾರ್ಥಿಯ ಕಲಿಕೆಗಾಗಿ ಸಹಾಯಧನ ಹಾಗೂ ಒರ್ವ ಅನಾರೋಗ್ಯ ಪೀಡಿತರಿಗೆ ಸಹಾಯಧನ ನೀಡಲಾಯಿತು, ಪಿ.ಯು.ಸಿ  ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಖಿಲ ಕರ್ನಾಟಕ  ರಾಜಕೇಶ್ವರಿ ತಂಡದ ಸದಸ್ಯ ಸಂದೇಶ್ ಅವರನ್ನು ಗೌರವಿಸಲಾಯಿತು.   

ವೇದಿಕೆಯಲ್ಲಿ ಯನೇಪೋಯ ಮೆಡಿಕಲ್ ಕಾಲೇಜ್ ನಿರ್ದೇಶಕರಾದ ಡಾ. ಅಶ್ವಿನಿ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ವೈದ್ಯಕೀಯ ಪ್ರಕೋಸ್ಟದ ಸಂಚಾಲಕರಾದ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಅಮ್ಟೂರು ಶ್ರೀ ಕೃಷ್ಣಮಂದಿರದ ಅಧ್ಯಕ್ಷರಾದ ರಮೇಶ್ ಕೆ, ಬಂಟ್ವಾಳ ತಾಲೂಕ ಅಧ್ಯಕ್ಷ ಪ್ರಸಾದ್ ಕುಲಾಲ್,  ಕೌಶಿಲ್ ಶೆಟ್ಟಿ ಬಾಳಿಕೆ , ಗಂಗಾಧರ ಟೈಲರ್ ಕೇಶವ ನಗರ, ವಿಕ್ಯಾತ್ ಶೆಟ್ಟಿ ಬಾಳಿಕೆ, ಸಂದೀಪ್ ಕುಪ್ಪೆಟ್ಟಿ, ಶೈಲೇಶ್ ಪೂಜಾರಿ ಕುರ್ಚಿಗುಡ್ಡೆ, ನಾಗೇಶ್ ಕುಲಾಲ್, ನವೀನ್ ಪೂಜಾರಿ ಕಾರಜೆ,ಶೇಖರ ಶೆಟ್ಟಿ ಬಾಳಿಕೆ, ಚಂದ್ರಶೇಖರ್ ರೈ,  ಚೆನ್ನಪ್ಪ ಆರ್ ಕೋಟ್ಯಾನ್ , ದಿನೇಶ್ ಅಮ್ಟೂರು , ಮಧುಶ್ರೀ ಎಮ್ ಡಿ ಕಾಣಿಯೂರು ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸುಖೇಶ್ ಕೆ ಪಿ,. ಕಿಶೋರ್ ಕುಮಾರ್ ಕಟ್ಟೆಮಾರ್, ಉಪಸ್ಥಿತರಿದ್ದರು.


ಶಿಬಿರದಲ್ಲಿ ಸಾಮಾನ್ಯ ತಜ್ಞರು, ಸ್ತ್ರೀ ರೋಗ , ಮಕ್ಕಳ  , ಕಣ್ಣು , ದಂತರೋಗ ತಜ್ಞರು ಭಾಗವಹಿಸಿದ್ದರು.           ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ  ಸಂದೀಪ್ ಬೆಳ್ತಂಗಡಿ ಸ್ವಾಗತಿಸಿದರು, ಶ್ರೀ ಮಂತ್ರ ದೇವತಾ ಸಾನಿಧ್ಯ  ಕಟ್ಟೆ ಮಾರ್ ಧರ್ಮದರ್ಶಿ ಮನೋಜ್ ಕುಮಾರ್ ವಂದಿಸಿದರು, ಕಿಶೋರ್ ಸುವರ್ಣ ಮುಂಡ್ಲಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter