ಪೊಳಲಿ ಸದಾನಂದ ರೈ ನಿಧನ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಮುಗುಳಿಯ ಸದಾನಂದ ರೈ (90) ಅಲ್ಪ ಕಾಲದ ಅನಾರೋಗ್ಯ ದಿಂದ ತನ್ನ ಸ್ವಗ್ರಹ ದಲ್ಲಿ ಮೇ 11 ರಂದು ಶನಿವಾರ ನಿಧನ ಹೊಂದಿದರು. ಮೃತರು ಪತ್ನಿ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ. ಅವರ ಅಂತ್ಯ ಕ್ರಿಯೆಯು ಶನಿವಾರ ಸಂಜೆ 5ಗಂಟೆಗೆ ಪೊಳಲಿ ಮುಗುಳಿಯ ಮನೆಯ ವಠಾರದಲ್ಲಿ ಜರಗಿತು. ಕುಟುಂಬದವರು ಅವರ ಹಿತ್ಯೆಸಿಗಳು, ಬಂಧುಬಳಗದವರು ಅಪಾರ ಸಂಖ್ಯೆಯಲ್ಲಿ ಅಂತ್ಯೆಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
