ಮಾದುಕೋಡಿಯಲ್ಲಿ ಕೊರಗಜ್ಜನ ವರ್ಷಾವಧಿ ಕೋಲ ಹಾಗೂ ಶ್ರೀ ಸಾಯಿ ಧ್ಯಾನ ಮಂದಿರ ಉದ್ಘಾಟನೆ
ಕೈಕಂಬ: ಮಾದುಕೋಡಿ ಕೊರಗಜ್ಜನ ವರ್ಷಾವಧಿ ಕೋಲ ಸೇವೆಯು ಫೆ.೧೮ರಂದು ಭಾನುವಾರ ನಡೆಯಲಿದೆ.

ಫೆ.೧೮ರಂದು ಭಾನುವಾರ ಮಾದುಕೋಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಸಾಯಿ ಧ್ಯಾನ ಮಂದಿರದ ಉದ್ಘಾಟನೆಯು ಶ್ರೀಧಾಮ ಮಾಣಿಲದ ಶ್ರೀ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮಿಜಿ, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ, ಬೆಂಜನಪದವು ಶ್ರೀ ಭದ್ರಕಾಳೀ ದೇವಸ್ಥಾನದ ಧರ್ಮದರ್ಶಿ ರಮೇಶ್ ಬಿ. ಇವರ ಉಪಸ್ಥಿತಿಯಲ್ಲಿ ಹುಬ್ಬಳ್ಳಿಯ ಪರಮಪೂಜ್ಯ ಶ್ರೀ ಶಿವಯೋಗಿ ಜಿ. ಮದನಭಾವಿ ಗುರುಗಳು ನರವೇರಿಸಲಿರುವರು ಎಂದು ಮಾದುಕೋಡಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ವಿಜಯ ಮಾದುಕೋಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.