ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ವಿಧಾನ ಪರಿಷತ್ ಸದಸ್ಯ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಜ.23ರಂದು ಮಂಗಳವಾರ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.
![](https://www.suddi9.com/wp-content/uploads/2024/01/10-650x260.jpg)
ಶ್ರೀ ಸೋಮನಾಥೇಶ್ವರ ದೇವಸ್ಥಾನ ಬ್ರಹ್ಮಕಳಶ ಸಮಿತಿ ಗೌರವಾಧ್ಯಕ್ಷ ಕೊಂಜಾಲುಗುತ್ತು ದಿವಾಕರ ಶೆಟ್ಟಿ ಆಗಮಿಸಿದ ಅಥಿತಿಗಳಿಗೆ ಶಾಲು ಹೊದಿಸಿ, ಫಲವಸ್ತು ನೀಡಿ ಗೌರವಿಸಿದರು.
![](https://www.suddi9.com/wp-content/uploads/2024/01/11-650x287.jpg)
ಈ ಸಂದರ್ಭದಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಳಶ ಸಮಿತಿ ಗೌರವಾಧ್ಯಕ್ಷ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಧ್ಯಕ್ಷೆ ಅಮ್ಮುಂಜೆಗುತ್ತು ಯಶೋಧ ಡಿ. ಶೆಟ್ಟಿ, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಅಮುಂಜೆಗುತ್ತು, ಆಡಳಿತ ಮಂಡಳಿ ಸದಸ್ಯ ದೇವ್ ದಾಸ್ ಹೆಗ್ಡೆ ಅಮುಂಜೆಗುತ್ತು, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ಕಾರ್ಯಾಧ್ಯಕ್ಷ ಕೆ. ಕೃಷ್ಣಕುಮಾರ ಪೂಂಜ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಬಾರಿಂಜೆ ಹಾಗೂ ಗ್ರಾಂ.ಪಂ. ಸದಸ್ಯ ಕಾರ್ತಿಕ್ ಬಳ್ಳಾಲ್ ಉಪಸ್ಥಿತರಿದ್ದರು.
![](https://www.suddi9.com/wp-content/uploads/2024/01/12-650x277.jpg)
![](https://www.suddi9.com/wp-content/uploads/2024/01/13-650x389.jpg)