ಶ್ರೀ ಸೋಮನಾಥೇಶ್ವರ ದೇವಸ್ಥಾನದ ಹಸಿರು ಹೊರೆಕಾಣಿಕೆ ಹಾಗೂ ಧಾರ್ಮಿಕ ಸಭೆ
ಕೈಕಂಬ: ಅಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶದ ಪ್ರಯುಕ್ತ ಜ.21ರಂದು ಭಾನುವಾರ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಮೆರವಣಿಗೆ ಹಾಗೂ ಧಾರ್ಮಿಕ ಸಭೆ ನಡೆಯಿತು.

ಮೆರವಣಿಗೆಯು ಬಡಕಬೈಲ್ ನಿಂದ ಪ್ರಾರಂಭಗೊಂಡು ವಿವಿಧ ಕುಣಿತ ಭಜನಾ ತಂಡಗಳಿಂದ, ಸ್ಥಬ್ದ ಚಿತ್ರ, ಚೆಂಡೆ ವಾದನದೊಂದಿಗೆ ಅಮುಂಜೆ ಶ್ರೀ ಸೋಮನಾಥೇಶ್ವರ ದೇವಾಲಯಕ್ಕೆ ಅಮುಂಜೆ ಮಾರ್ಗವಾಗಿ ಸಾಗಿತು.

ಮೆರವಣಿಗೆಯಲ್ಲಿ ಹಲವಾರು ಕಡೆಗಳಿಂದ ಜನರು ಆಗಮಿಸಿದರಲ್ಲದೆ ಅನೇಕ ಕಡೆಗಳಿಂದ ಹೊರೆ ಕಾಣಿಕೆ ಶ್ರೀ ದೇವರಿಗೆ ಸಲ್ಲಿಸಿದರು.
ಬಳಿಕ ನಡೆದ ಧಾರ್ಮಿಕ ಸಭೆಯನ್ನು ಶ್ರೀ ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯದ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಲ್ಕಿ, ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಪ್ರಧಾನ ಅರ್ಚಕ ಪವಿತ್ರಪಾಣಿ ಪಿ.ಮಾಧವ ಭಟ್, ಶ್ರೀ ಕ್ಷೇತ್ರ ಪೊಳಲಿಯ ಅರ್ಚಕ ನಾರಾಯಣ್ ಭಟ್, ಶ್ರೀ ಕ್ಷೇತ್ರ ಪೊಳಲಿ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮುಂಜೆಗುತ್ತು, ಶ್ರೀ ಸೋಮನಾಥೇಶ್ವರ ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಶ್ರೀ ಸೋಮನಾಥೇಶ್ವರ ಬ್ರಹ್ಮಕಲಶ ಸಮಿತಿ ಅಧ್ಯಕ್ಷೆ ಯಶೋಧ ಡಿ. ಶೆಟ್ಟಿ ಅಮುಂಜೆಗುತ್ತು, ರವೀಂದ್ರ ಶೆಟ್ಟಿ ಅಮುಂಜೆಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನಾರ್ಧನ್ ಅಮುಂಜೆ ನಿರೂಪಿಸಿದರು. ಕೃಷ್ಣಕುಮಾರ ಪೂಂಜ ಸ್ವಾಗತಿಸಿದರು. ಸತ್ಯಪ್ರಸಾದ್ ಶೆಟ್ಟಿ ಅಮ್ಮುoಜೆ ವಂದಿಸಿದರು