ನ.14 ರಂದು ಮಂಚಿಯಲ್ಲಿ ದ.ಕ.ಜಿಲ್ಲಾ ಮಟ್ಟದ ಸಹಕಾರ ಸಪ್ತಾಹಕ್ಕೆ ಚಾಲನೆ
ಬಂಟ್ವಾಳ: 70 ನೇ ಅಖಿಲ ಭಾರತ ಸಹಕಾರ ಸಪ್ತಾಹ- 23 ಇದರ ಪ್ರಯುಕ್ತ ದ.ಕ.ಜಿಲ್ಲಾ ಮಟ್ಟದ ಸಹಕಾರ ಸಪ್ತಾಹವು ಬಂಟ್ವಾಳ ತಾಲೂಕಿನ ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ಮಂಚಿ, ಕುಕ್ಕಾಜೆ ಇದರ ನೇತೃತ್ವದಲ್ಲಿ ನ.14 ರಂದು ಮಂಚಿ ವ್ಯ.ಸೇ.ಸ.ಸಂಘದ ವಠಾರದಲ್ಲಿ ನಡೆಯಲಿದೆ.

ಮಂಗಳವಾರ ಮಂಚಿ ವ್ಯ.ಸೇ.ಸ. ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು, ಜಿಲ್ಲಾ ಮಟ್ಟದ ಸಪ್ತಾಹದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ನೆರವೇರಿಸುವರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಇದಕ್ಕೂ ಮೊದಲು ಮಂಚಿ ವ್ಯ.ಸೇ.ಸ.ಸಂಘದ ಆವರಣದಲ್ಲಿ ಸಹಕಾರಿ ಧ್ವಜಾರೋಹಣ ನಡೆದು ಬಳಿಕ ಇಲ್ಲಿಂದ ಸಮಾರಂಭ ನಡೆಯುವ ಮೈದಾನದವರೆಗೂ ವೈಭಯುತವಾದ ಮೆರವಣಿಗೆ ಸಾಗಲಿದ್ದು, ಮಾಜಿ ಸಚಿವ ರಮಾನಾಥ ರೈ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಹಕಾರಿ ಧುರೀಣರು, ಸಹಕಾರ ಸಂಘದ ಅಧಿಕಾರಿಗಳು, ಜನ ಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಪ್ತಾಹದ ಉದ್ಘಾಟನಾ ಸಮಾರಂಭದ ಬಳಿಕ “ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿಗಿನ ಬೆಳವಣಿಗೆ”ಯ ಬಗ್ಗೆ ದ.ಕ.ಜಿ.ಕೇ.ಸ.ಬ್ಯಾಂಕ್ ನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರಿಂದ ಉಪನ್ಯಾಸ, ವಸ್ತು ಪ್ರದರ್ಶನವು ಇರಲಿದೆ.
ಈ ಸಂದರ್ಭ ಹಿರಿಯ ಸಹಕಾರಿಗಳು, ಮಾಜಿ ಸಿಒಗಳು ಪ್ರಗತಿಪರ ಕೃಷಿಕರು, ನವೋದಯ ಪ್ರೇರಕಿಯರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಥಳೀಯ ಎರಡು ಸಂಘಟನೆಯನ್ನು ಅಭಿನಂದಿಸಲಾಗುವುದು ಎಂದು ಪ್ರಸಾದ್ ಕೌಶಲ್ ಶೆಟ್ಟಿ ವಿವರಿಸಿದರು.
ನ.14 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ನೇತೃತ್ವದಲ್ಲಿ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ನ.15 ರಂದು ಪಿಲಾತಬೆಟ್ಟು ವಿ.ಎಸ್.ಎಸ್., 16 ರಂದು ಮೂಡಬಿದ್ರೆ ವಿ.ಎಸ್.ಎಸ್., 17 ರಂದು ಪಾಣಾಜೆ ವಿ.ಎಸ್.ಎಸ್., 18 ರಂದು ನೆಲ್ಲೂರು ಕೆಮ್ತಾಜೆ ವಿ.ಎಸ್ .ಎಸ್., 20 ರಂದು ಮುಂಡಾಜೆ ವಿ.ಎಸ್.ಎಸ್.ನಲ್ಲಿ ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ.ಜಿ.ಕೇ.ಸ.(ನಿ.)ಬ್ಯಾಂಕ್ ಮಂಗಳೂರು, ದ.ಕ.ಜಿ.ಸ.ಯೂ.(ಲಿ.)ಮಂಗಳೂರು ಬಂಟ್ಚಾಳ ತಾಲೂಕಿನ ಎಲ್ಲಾ ಪ್ರಾ.ಕೃ.ಪ.ಸ.ಸಂಘಗಳು, ಮಂಚಿ ಮಹಾದೇವ ವಿ.ಸ.ಸಂಘ, ಲಕ್ಷ್ಮೀ ನರಸಿಂಹ ವಿ.ಸ.ಸ.ಮಂಚಿ, ಹಾಲು ಉ.ಸ.ಸಂಘ ಮಂಚಿ, ಹಾಲು ಉ.ಸ.ಸಂಘ ಇರಾ, ಬಂಟ್ವಾಳ ತಾಳೆ ಕೆಲಸಗಾರರ ವಿ.ಸ.ಸ.ಇರಾ ಇವುಗಳು ಕೂಡ ಸಹಕರಿಸಲಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಮಂಚಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ಬಿ.ಉಮ್ಮರ್, ಉಪಾಧ್ಯಕ್ಷ ವಿಶ್ವನಾಥ ನಾಯ್ಕ ಎನ್, ಸಿಇಒ ನಾರಾಯಣ ಪಿ, ಮಂಚಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ ಜಿ.ಎಲ್, ಸಹಕಾರಿ ಯೂನಿಯನ್ ಸಿಇಒ ಎಸ್.ವಿ.ಹಿರೇಮಠ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕ ಯೋಗೀಶ ಎಚ್, ಮಹಾದೇವ ವಿ.ಸ.ಸಂಘ ಅಧ್ಯಕ್ಷ ಮೋಹನ್, ಬಂಟ್ವಾಳ ತಾಳೆ ಕೆಲಸಗಾರರ ವಿ.ಸ.ಸಂಘ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಚಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮುರಳೀಧರ ಆಳ್ವ, ಮಂಚಿ ಲಕ್ಷ್ಮೀನರಸಿಂಹ ವಿ.ಸ.ಸಂಘ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಮಂಚಿ ಸಂಘದ ನಿರ್ದೇಶಕ ಚಂದ್ರಹಾಸ ಕರ್ಕೇರ, ಅಬ್ದುಲ್ ರಹಿಮಾನ್, ಭಾಗೀರಥಿ ಎಂ, ಮೋಹನದಾಸ ಶೆಟ್ಟಿ, ಕೇಶವ ರಾವ್ ಎನ್, ದಿವಾಕರ ನಾಯಕ್, ಸುಧಾಕರ ರೈ, ಫಿಲೋಮಿನಾ, ಸಂಧ್ಯಾಕುಮಾರಿ ಸ್ಥಳೀಯ ಸಂಘಗಳ ಪ್ರಮುಖರಾದ ಪುಷ್ಪರಾಜ ಕುಕ್ಕಾಜೆ ಸಹಿತ ಪ್ರಮುಖರು ಉಪಸ್ಥಿತರಿದ್ದರು.