ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಪ್ಪದ ಪೂಜೆ, ಓಕುಳಿ ಭಜನೆಯ ವಿಶೇಷತೆ
ಪೊಳಲಿ: ಇತಿಹಾಸ ಪ್ರಸಿದ್ದ ಪುಣ್ಯ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ವೃಶ್ಚಿಕ ಮಾಸದಲ್ಲಿ ನಡೆಯುವ ಅಪ್ಪದ ಪೂಜೆ ಬಹಳ ವಿಶೇಷ ಹಿಂದಿನ ಕಾಲದಲ್ಲಿ ಮಳೆ ಬಾರದೆ ಬರಗಾಲ ದಿಂದ ಕ್ರಷಿ ಚಟುವಟಿಕೆಗಳು ನಡೆಯದಿದ್ದಾಗ ಸಾವಿರ ಸೀಮೆಯ ಭಕ್ತರು ಸೇರಿ ಶ್ರೀ ದೇವಿಯಲ್ಲಿ ಪ್ರಾರ್ಥಿಸಿ ಕೃಷಿ ಭತ್ತ ಬೆಳೆಯು ಸರಿಯಾಗಿ ಬಂದರೆ ಬೆಳೆಯಲ್ಲಿ ಒಂದಂಶ ದಿಂದ ದೇವರಿಗೆ ಅಪ್ಪವನ್ನು ಮಾಡಿ ದೇವರಿಗೆ ಅರ್ಪಿಸುತ್ತೆವೆ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹಿರಿಯರ ಮಾತು.
ನಂತರ ಭಕ್ತರು ಅವರವರ ಜಮೀನಿನಲ್ಲಿ ಕೃಷಿ ಬೆಳೆಗಳನ್ನು ಮಾಡಿ ಕೃಷಿ ಬೆಳೆಯಲ್ಲಿ ಬಂದ ಒಂದಂಶವನ್ನು ದೇವಳಕ್ಕೆ ಒಪ್ಪಿಸಿ ರಸೀದಿ ಪಡೆದು ಅಪ್ಪದ ಪೂಜೆಯ ದಿನ ದೇವರಿಗೆ ಅಪ್ಪವನ್ನು ಸಮರ್ಪಿಸಿ ಸಾವಿರ ಸೀಮೆಯ ಭಕ್ತಾಗಳು ಅಪ್ಪ ಸ್ವೀಕರಿಸುವ ಪ್ರತೀತಿ ಇತ್ತು .ಪೊಳಲಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ ಸಮಸ್ತರ ಪಾಲ್ಗೊಳ್ಳುವಿಕೆಯಲ್ಲಿ ಅಪ್ಪದಸೇವೆಯು ನಡೆಯತ್ತ ಬಂದಿದೆ. ಇಲ್ಲಿಯ ಅಪ್ಪದ ಪೂಜೆಗೆ ಇಲ್ಲಿದ್ದೆ ಆದ ಕೆಲವು ವಿಶೇಷತೆಗಳಿದೆ.
ರಾಜರಾಜೇಶ್ವರೀ ಭಜನಾ ಮಂಡಳಿಯವರಿಂದ ಭಜನೋತ್ಸವ. ದೀಪಾವಳಿಯಂದು ನಗರ ಭಜನೆ ಹೊರಟು ಅಪ್ಪದ ಪೂಜೆಯಂದು ಏಕಹಾ ಭಜನೆ ನಡೆಯುತ್ತದೆ. ಪೊಳಲಿಯಲ್ಲಿ ನೂರು ವರ್ಷದ ಹಿಂದಿನಿಂದಲು ಭಜನೋತ್ಸವ ನಡಯುತ್ತಿತ್ತು ಇಲ್ಲಿಯ ಭಜನೋತ್ಸವದ ಮಂಗಳೋತ್ಷವ ಬಹಳ ವಿಶೇಷತೆ ಹೊಂದಿದೆ.
ರಾಜರಾಜೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದಲೇ ಓಕುಳಿ ಮಂಗಳೋತ್ಸವ ನಡೆಯುತ್ತದೆ .ಹರಿವಿಠಲ್ ಜೈ ವಿಠಲ್ ವಿಠಲ್ ವಿಠಲ್ ಎಂದು ಭಜನೆಯೊಂದಿಗೆ ಕುಣಿಯುತ್ತಾ ಮಲಗಿ ಹೋರಲಾಡಿ ನಾಮಸ್ಮರಣೆಯಿಂದಿಗೆ ಭಜನೆ ಮಂಗಲೋತ್ಸವ ಆಗುತ್ತದೆ. “ವೆಂಕಟೇಶ್ ನಾವಡ. ರಾಜರಾಜೇಶ್ವರೀ ಭಜನಾಮಂಡಳಿಯ ಅಧ್ಯಕ್ಷ. ” ಓಕುಳಿಯಾಟ ಆಡಿ ಪೊಳಲಿ ದೇವಳದಿಂದ ಶ್ರೀ ಅಖಿಲೇಶ್ವರ ದೇವಸ್ಥಾನದವರೆಗೆ ತೆರಲಿ ಅಲ್ಲಿ ಪಲ್ಘುಣಿ ನದಿಯಲ್ಲಿ ಜಲಕ ಮಾಡಿ ಪುನ,: ಪೊಳಲಿ ದೇವಳಕ್ಕೆ ಬಂದು ಮಂಗಲೋತ್ಸವ ನಡೆಯುತ್ತದೆ.
ಅಪ್ಪ ತಯಾರಿಕೆಗೆ ಮುಹೂರ್ತ.
ನೂಯಿ ಕಾಂಜಿಲಕೋಡಿ ಚಂದ್ರಶೇಖರ ರಾವ್ ಅವರ ಮಾರ್ಗದರ್ಶನದಲ್ಲಿ ಸುಮಾರು 30 ಬ್ರಾಹ್ಮಣರು ೧೨ ಕಾವಲಿಯಲ್ಲಿ ಅಪ್ಪ ತಯಾರಿಕೆಯಲ್ಲಿ ತೊಡಗುತ್ತಾರೆ. ಈ ಭಾರಿ ೧೫ ಸಾವಿರ ಅಪ್ಪದ ಪೂಜೆ ಭಕ್ತಾಧಿಗಳಿಂದ ನಡೆದಿದೆ. ೮0 ಸಾವಿರದಷ್ಟು ಅಪ್ಪ ತಯಾರಿಸುತ್ತಾರೆ. ರಾತ್ರಿ ದೇವಳದ ಅರ್ಚಕರು ಹಾಗು ಗುತ್ತಿನವರ ಸಮಕ್ಷಮದಲ್ಲಿ ವಾದ್ಯ ಗೋಷ್ಟಿಯೊಂದಿಗೆ ತಯಾರಾದ ಅಪ್ಪಗಳನ್ನು ರಾತ್ರಿ ಶ್ರೀದೇವಿಗೆ ಅಪ್ಪ ಸಮರ್ಪಿಸಿ ಮಹಾಪೂಜೆಯ ಬಳಿಕ ಅಪ್ಪಗಳನ್ನು ಭಕ್ತಾದಿಗಳ ನೆರವಿನಿಂದ ಲಕೋಟೆಯಲ್ಲಿ ಹಾಕಿ ಸಿದ್ದ ಮಾಡುತ್ತಾರೆ ನಂತರ ದೇವರ ಬಲಿ ಹೊರಟ ನಂತರ ಪ್ರಸಾದವಿತರಣೆಯನ್ನು ಮಾಡುತ್ತಾರೆ.
ಅಪ್ಪ ಪ್ರಸಾದ ಸ್ವೀಕರಿಸಿದ ಭಕ್ತರಲ್ಲಿ ಅದೇನೊ ದನ್ಯತಾಭಾವ ಮೂಡುವುದು ಕಾಣಿಕೆ ಸಮರ್ಪನೆ ಅಪ್ಪದ ಪೂಜೆಗೆ ಸಂಭದಪಟ್ಟ ಸಾವಿರ ಸೀಮೆಯಮಂದಿ ಕಾಣಿಕೆ,ವಂತಿಗೆಯನ್ನು ನೀಡಿ ಅಪ್ಪದ ಪೂಜೆ ಮಾಡಿಸಿ ಪ್ರಸಾದ ಸ್ವೀಕರಿಸಲು ಜನ ಉತ್ಸಾಹದಿಂದ ಕಾಯುತ್ತಾರೆ.