ಬಂಟ್ವಾಳ:ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ಕುರಿಯಾಳ ಗ್ರಾಮದ ಪಾಪುದಡ್ಕದಲ್ಲಿ 1.35 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿಅಣೆಕಟ್ಟು ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು. ಪ್ರತಿ ಗ್ರಾಮದಲ್ಲಿ ರೈತರಿಗೆ ಕೃಷಿಗೆ ಪೂರಕವಾಗುವ ರೀತಿಯಲ್ಲಿ ನೀರಿನ ಅಂತರ್ಜಲವನ್ನು ವೃದ್ದಿಸುವ ನಿಟ್ಟಿನಲ್ಲಿ ಕಿರುಹೊಳೆಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ.

ಜೊತೆಗೆ ಅಭಾಗದ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ರೈತರ ಆರ್ಥಿಕ ವ್ಯವಸ್ಥೆ ಯನ್ನು ಇಮ್ಮಡಿಗೊಳಿಸುವ ಮೂಲ ಉದ್ದೇಶ ಹೊಂದಿದ್ದು ಇದರ ಸಂಪೂರ್ಣ ಪ್ರಯೋಜನ ಪಡೆಯಲು ಅವರು ತಿಳಿಸಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕುರಿಯಾಳ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನಿಲ್, ಮಾಜಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಸದಸ್ಯರಾದ ರೂಪೇಶ್ ಕುರಿಯಾಳ, ಶ್ರೀದೇವಿ , ಸುಹಾಸಿನಿ, ಅಶ್ವಿನಿ ಶೆಟ್ಟಿ, ಯಶೋಧ, ಪಿ. ಎಲ್.ಡಿ.ಬ್ಯಾಂಕ್ ನಿರ್ದೇಶಕ ಸುದರ್ಶ ಬಜ, ಬಿಜೆಪಿ ಉಪಾಧ್ಯಕ್ಷ ರೊನಾಲ್ಡೊ ಡಿಸೋಜ, ಪ್ರಮುಖರಾದ ಹರೀಶ್ ಕುಕ್ಕುರಿ,ತಾಚಪ್ಪ ಪೂಜಾರಿ, ವಿಶ್ವನಾಥ್, ಮೋನಪ್ಪ ಗೌಡ, ಜಗದೀಶ್ ಭಂಡಾರಿ, ಸುರೇಂದ್ರ ಪಾಪುದಡ್ಕ, ಆಶೋಕ್ ಪಾಪುದಡ್ಕ, ಸತೀಶ್ ಮಾಡಾಜೆ, ರಾಜೇಶ್ ಇರಾಕೋಡಿ, ವೇದಾನಂದ ಕಾರಂತ,ಪ್ರದೀಪ್ ಮಾರ್ಲ,ಪ್ರಸನ್ನ ಶೆಟ್ಟಿ, ಗಣೇಶ್ ರೈ ಮಾಣಿ, ಆಶ್ವಥ್ ರಾವ್ ಬಾಳಿಕೆ , ಸಣ್ಣ ನೀರಾವರಿ ಇಲಾಖೆಯ ಸಹಾಯಕ ಶಿವಪ್ರಸನ್ನ, ಕುರಿಯಾಳ ಗ್ರಾ.ಪಂ.ಪಿಡಿ.ಒ ರವಿ ಪಿ.ಗುತ್ತಿಗೆದಾರ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.

