ಬಜ್ಪೆ: ಅಮೇರಿಕಾ ಲಾಸ್ ವೇಗಸ್ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ತಲಾ ಎರಡು ಚಿನ್ನದ ಪದಕ ವಿಜೇತರಾದ ಮಂಗಳೂರು ವಿರಾಂಜನೆಯ ವ್ಯಾಯಮ ಶಾಲೆಯ ವಿಜಯ್ ಕಾಂಚನ್ ಮತ್ತು ಕಿನ್ನಿಗೋಳಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಕ್ಷತಾ ಪೂಜಾರಿಯವರನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಬರ ಮಾಡಿ ಕೊಳ್ಲಲಾಯಿತು.

ನಂತರ ವಿಜೇತರನ್ನು ಮೆರವಣಿಗೆ ಮೂಲಕ ಕರೆತರಲಾಯಿತು ದಾರಿಯುದ್ದಕೂ ನೂರಾರು ವಾಹನಗಳು ಮತ್ತು ಚೆಂಡೆ ವಾದನಗಳು ಮೊಳಗು ತ್ತಿದ್ದವು, ಕಟೀಲು ದೇವಳದಲ್ಲಿ ಅಕ್ಷತಾ ಪೂಜಾರಿಯವರನ್ನು ಪ್ರಸಾದ ಕೊಟ್ಟು ಗೌರವಿಸಲಾಯಿತು,
ಕಾರ್ಕಳ ಶಾಸಕ ಸುನಿಲ್ ಕುಮಾರ್, ಮೆಯರ್ ಮಹಾಬಲ ಮಾರ್ಲ, ಕರಾಟೆ ಶಿಕ್ಷಕ ಈಶ್ವರ್ ಕಟೀಲ್, ಸತ್ಯಜಿತ್ ಸುರತ್ಕಲ್, ಸತೀಶ್ ಕುದ್ರೋಳಿ, ಎ.ಸಿ. ರವಿ ಕುಮಾರ್, ಬಜಪೆ ಠಾಣಾಧಿಕಾರಿ ನರಸಿಂಹ ಮೂರ್ತಿ ಮುಲ್ಕಿ ಠಾಣಾಧಿಕಾರಿ ರಾಮಚಂದ್ರ ನಾಯಕ್ ಯುಗಪುರುಷದ ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ಜನಾರ್ದನ ಕಿಲೆಂಜೂರು, ಬಾಸ್ಕರ ಪೂಜಾರಿ, ಆದರ್ಶ ಶೆಟ್ಟಿ ಎಕ್ಕಾರು, ಕೇಶವ ಕರ್ಕೇರಾ, ಪ್ರತೀಕ್ ಶೆಟ್ಟಿ , ಲೋಕೇಶ್ ಶೆಟ್ಟಿ , ಕೃಷ್ಣ ಪ್ಪ ಎರಡು ವ್ಯಾಯಮ ಶಾಲೆಯ ಸದ್ಸ್ಯರು ಪೋಲೀಸ್ ಅಧಿಕಾರಿಗಳು ಮತ್ತಿತರರಿದ್ದರು.




