ಕಿನ್ರನಿಗೋಳಿ: ಪಕ್ಷಿಕೆರೆ ರಸ್ತೆ ದುರಸ್ತಿಪಡಿಸುವಂತೆ ಒತ್ತಾಯಿಸಿ ಪಕ್ಷಿಕೆರೆ ರಿಕ್ಷ ಚಾಲಕರು, ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಇಂದು ಪಕ್ಷಿಕೆರೆಯ ಪಂಜ, ಕಾಪಿಕಾಡ್ ರಸ್ತೆಯನ್ನು ತಡೆದು ಸಂಪರ್ಕಿಸಲಾಯಿತು.
ಪಕ್ಷಿಕೆರೆಯಿಂದ ಕಾಪಿಕಾಡ್, ಪಂಜ ಮತ್ತು ಸುರಗಿರಿಗೆ ಹೊಗುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರಿಗೆ ಮತ್ತು ದಿನ ನಿತ್ಯ ಪ್ರಯಾಣಿಕರಿಗೆ ಸಮಸ್ಸ್ಯೆಯಾಗುತ್ತಿದೆ, ರಾಜಕೀಯ ರಸ್ತೆ ಡಾಮರೀಕರಣ ಮುಂಚೆ, ದೊಡ್ದ ದೊಡ್ದ ಕಟ್ಟೌಟ್ಗಳನ್ನು ಹಾಕಿ ಅನುದಾನ ಬಿಡುಗಡೆ ಗೊಳಿಸಿದ್ದಕ್ಕಾಗಿ ಕ್ರತಜ್ಞತೆ ಸಲ್ಲಿಸುತ್ತಾರೆ ಆದರೆ ಡಾಮರೀಕರಣ ಗೊಳ್ಳುದಿಲ್ಲ ರಾಜಕಾರಣಿಗಳು ಕೇವಲ ಭರವಸೆಯನ್ನೇ ಕೊಡುತ್ತಾರೆ, ಎಂದು ಆರೋಪಿಸಿದರು. ಪಂಜ ರಸ್ತೆಯನ್ನು ತಡೆದು ಸಾರ್ವಜನಿಕ ಹಿತಾಸಕ್ತಿಗೆ ಅಡ್ಡಿ ಪಡಿಸಿದ್ದಾಕ್ಕಾಗಿ ಪ್ರತಿಭಟನಾಕಾರರನ್ನು ಮುಲ್ಕಿ ಪೋಲಿಸರು ಬಂಧಿಸಿ ಬಿಡುಗಡೆ ಗೋಳಿಸಲಾಯಿತು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕರು, ಮಾಲಕರು ಮತ್ತು ವಿವಿಧ ಸಂಘ ಸಂಸ್ಥೆಯ ಸದ್ಸ್ಯರು ಪಾಲ್ಗೊಂಡಿದ್ದರು.



